ರಸ್ತೆ ನಡುವೆಯೇ ಹೆಂಡ್ತಿಯನ್ನ ಕೊಚ್ಚಿ ಕೊಂದು ಸ್ಥಳದಲ್ಲೇ ಕೂತಿದ್ದ!

Public TV
1 Min Read

ಶಿವಮೊಗ್ಗ: ಅನೈತಿಕ ಸಂಬಂಧದ ಶಂಕೆಯಿಂದ ವ್ಯಕ್ತಿಯೊಬ್ಬ ತನ್ನ ಹೆಂಡತಿಯನ್ನು ರಸ್ತೆ ಮಧ್ಯೆಯೇ ಕೊಚ್ಚಿ ಕೊಂದ ಘಟನೆ ಶಿವಮೊಗ್ಗದ ರಾಗಿಗುಡ್ಡದಲ್ಲಿ ಇಂದು ಬೆಳಗ್ಗೆ ನಡೆದಿದೆ.

ಕುಂಸಿಯ ಮಂಜುಳಾ ಕೊಲೆಯದ ದುರ್ದೈವಿ. ಈಕೆಯನ್ನು ಕೊಲೆ ಮಾಡಿದ ಗಂಡ ರಮೇಶನನ್ನು ಪೆÇಲೀಸರು ಬಂಧಿಸಿದ್ದಾರೆ. ಕುಂಸಿಯಲ್ಲಿ ಗಾರೆ ಕೆಲಸ ಮಾಡುತ್ತಿದ್ದ ರಮೇಶ್ ಮೊದಲ ಹೆಂಡತಿಯನ್ನು ಬಿಟ್ಟು ಮಂಜುಳಾಳನ್ನು ಮದುವೆಯಾಗಿದ್ದ. ಆದರೆ ಮಂಜುಳಾ ಇನ್ನೊಬ್ಬನ ಜೊತೆ ಅಕ್ರಮವಾಗಿ ಸಂಬಂಧ ಇಟ್ಟುಕೊಂಡಿದ್ದಾಳೆ ಎಂಬ ಶಂಕೆಯಿಂದ ರಮೇಶ್ ಈ ಕೃತ್ಯವೆಸಗಿದ್ದಾನೆ.

ಸೋಮವಾರ ರಾತ್ರಿ ರಾಗಿಗುಡ್ಡಕ್ಕೆ ಕೆಲಸ ಕೇಳಲು ಪತ್ನಿ ಸಮೇತ ಬಂದಿದ್ದ ರಮೇಶ ಮತ್ತೆ ಹಿಂತಿರುಗಿದ್ದ. ಇಂದು ಮುಂಜಾನೆ ಪತ್ನಿಯೊಂದಿಗೆ ಬಂದ ಈತ ರಸ್ತೆ ನಡುವೆಯೇ ಹೆಂಡತಿಯನ್ನು ಕೊಚ್ಚಿ ಕೊಂದಿದ್ದಾನೆ. ಹೆಂಡತಿಯನ್ನು ಕೊಂದು ಸ್ಥಳದಲ್ಲೇ ಕೂತಿದ್ದ ಈತನನ್ನು ಗ್ರಾಮಾಂತರ ಪೆÇಲೀಸರು ವಶಕ್ಕೆ ಪಡೆದು ಬಂಧಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *