ಕುಡಿದ ಮತ್ತಿನಲ್ಲಿ ಬಿಲ್ ಕೇಳಿದ ಬಾರ್ ಮಾಲೀಕನಿಗೆ ಚಾಕುವಿನಿಂದ ಇರಿದ್ರು

Public TV
1 Min Read

ಉಡುಪಿ: ಕುಡಿದ ಮತ್ತಿನಲ್ಲಿ ಬಾರ್ ಮಾಲೀಕನ ಜೊತೆ ಜಗಳವಾಡಿ ಚಾಕುವಿನಿಂದ ಇರಿದಿರುವ ಘಟನೆ ಉಡುಪಿಯಲ್ಲಿ ನಡೆದಿದೆ.

ಮಂಗಳವಾರ ರಾತ್ರಿ ನಗರದ ಬೈಲಕೆರೆಯ ಮೂರು ಮಂದಿ ಯುವಕರು ಪಂಚರತ್ನ ಪ್ಯಾರಡೈಸ್ ಬಾರ್ ಆಂಡ್ ರೆಸ್ಟೋರೆಂಟಿಗೆ ಬಂದಿದ್ದರು. ಕಂಠಪೂರ್ತಿ ಕುಡಿದು ಬಿಲ್ ಕೊಡದೆ ಹೊರಡಲು ನಿರ್ಧರಿಸಿದಾಗ ಮ್ಯಾನೇಜರ್ ಬೈದು ಹಣ ವಸೂಲಿ ಮಾಡಿದ್ದಾರೆ.

ಈ ಸಂದರ್ಭದಲ್ಲಿ ಮಾತಿನ ಚಕಮಕಿ ನಡೆದು ಹಣ ಕೊಟ್ಟು ಅಲ್ಲಿಂದ ಎಲ್ಲರೂ ತೆರಳಿದ್ದಾರೆ. ನಂತರ ಒಂದು ಗಂಟೆ ಬಿಟ್ಟು ಲಾಂಗ್, ತಲವಾರುಗಳೊಂದಿಗೆ ಸ್ಥಳಕ್ಕೆ ಬಂದ ಆರೋಪಿಗಳು ಬಾರ್ ಓನರ್ ಮೇಲೆ ಹಲ್ಲೆ ನಡೆಸಿದ್ದಾರೆ. ಇದೇ ಸಮಯದಲ್ಲಿ ಕಿರಣ್ ಎಂಬಾತ ತನ್ನ ಕೈಯ್ಯಲ್ಲಿದ್ದ ಚಾಕುವಿನಿಂದ ಬಾರ್ ಓನರ್‍ಗೆ ಇರಿದಿದ್ದಾನೆ.

ಬಾರ್ ಮಾಲೀಕನ ಮೇಲೆ ಹಲ್ಲೆ ಮಾಡಿದ ವ್ಯಕ್ತಿಗಳನ್ನು ಬೈಲಕೆರೆಯ ಸಂತೋಷ್, ಅನ್ವರ್ ಹಾಗೂ ಆತನ ನಾಲ್ವರು ಗೆಳೆಯರು ಎಂದು ಗುರುತಿಸಲಾಗಿದೆ. ಬಾರ್ ಓನರ್ ಗೆ ಚಾಕುವಿನಿಂದ ಇರಿಯುತ್ತಿದ್ದಂತೆ, ಬಾರ್ ನಲ್ಲಿದ್ದ ಕೆಲಸಗಾರರು ಕಿರಣ್ ಮತ್ತು ಅನ್ವರ್‍ಗೆ ಮನಬಂದಂತೆ ವಿಕೆಟ್, ಹಾಕಿ ಸ್ಟಿಕ್‍ನಿಂದ ಹೊಡೆದಿದ್ದಾರೆ. ಘಟನೆಯಲ್ಲಿ ಬಾರ್ ಮಾಲೀಕ ಸಂತೋಷ್ ಶೆಟ್ಟಿ, ತಲ್ವಾರ್ ಬೀಸಿದ ಕಿರಣ್ ಮತ್ತು ಅನ್ವರ್ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಘಟನೆಯ ಕುರಿತು ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *