ಕಲ್ಲು, ದೊಣ್ಣೆಯಿಂದ ಹೊಡೆದು ವ್ಯಕ್ತಿಯೋರ್ವನ ಬರ್ಬರ ಕೊಲೆ

Public TV
0 Min Read

ರಾಯಚೂರು: ಕಲ್ಲು ಹಾಗು ದೊಣ್ಣೆಗಳಿಂದ ಹೊಡೆದು ವ್ಯಕ್ತಿಯೋರ್ವನನ್ನು ಬರ್ಬರವಾಗಿ ಕೊಲೆಗೈದಿರುವ ಘಟನೆ ಜಿಲ್ಲೆಯ ಮಾನ್ವಿ ತಾಲೂಕಿನ ಬ್ಯಾಗವಾಟ ಗ್ರಾಮದಲ್ಲಿ ನಡೆದಿದೆ.

45 ವರ್ಷದ ಬೈರಪ್ಪ ಕೊಲೆಯಾದ ವ್ಯಕ್ತಿ. ಇಂದು ಗ್ರಾಮದ ಹೊರವಲಯದ ಕೆಂಚಮ್ಮದೇವಿ ದೇವಸ್ಥಾನ ಬಳಿ ಬೈರಪ್ಪ ಶವ ಪತ್ತೆಯಾಗಿದೆ. ಸದಾ ಮದ್ಯವ್ಯಸನಿಯಾಗಿದ್ದ ಬೈರಪ್ಪ ನಿರುದ್ಯೋಗಿಯಾಗಿದ್ದ. ಈತನ ಕಾಟ ತಾಳಲಾರದೇ ಪತ್ನಿ ತವರು ಮನೆ ಸೇರಿಕೊಂಡಿದ್ದರು.

ಕುಡಿದ ಅಮಲಿನಲ್ಲಿ ಜಗಳವಾಗಿ ಜೊತೆಗಿದ್ದವರೇ ಕೊಲೆ ಮಾಡಿರಬಹುದು ಅಂತ ಶಂಕಿಸಲಾಗಿದೆ. ಈ ಸಂಬಂಧ ಮಾನ್ವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *