ವ್ಯಕ್ತಿಗೆ ಅರ್ಧ ತಲೆ ಬೋಳಿಸಿ, ಲಂಗ ಹಾಕಿ, ಅರೆ ಬೆತ್ತಲು ಮಾಡಿ ಊರೆಲ್ಲಾ ಮೆರವಣಿಗೆ

Public TV
1 Min Read

ವಿಜಯಪುರ: ಯುವತಿವೊಬ್ಬಳನ್ನು ಚೂಡಾಯಿಸಿದ್ದಕ್ಕೆ ವ್ಯಕ್ತಿಯೊಬ್ಬನನ್ನು ಗ್ರಾಮಸ್ಥರು ಮತ್ತು ಯುವತಿಯ ಕುಟುಂಬದವರು ಸೇರಿ ಅರಬೆತ್ತಲೆಗೊಳಿಸಿ ಮೆರವಣಿಗೆ ಮಾಡಿರುವ ಘಟನೆ ವಿಜಯಪುರದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಸಿಂದಗಿ ತಾಲೂಕಿನ ಹಿಟ್ನಳ್ಳಿ ತಾಂಡಾದಲ್ಲಿ ಈ ಘಟನೆ ನಡೆದಿದೆ. ಶಂಕರ್(43) ಎಂಬಾತ ತಾಂಡಾದಲ್ಲಿರುವ ಯವತಿನ್ನು ಚೂಡಾಯಿಸುತ್ತಿದ್ದ. ಹೀಗಾಗಿ ಅಲ್ಲಿಯ ಗ್ರಾಮಸ್ಥರು ಮತ್ತು ಯುವತಿಯ ಕುಟುಂಬದವರು ಸೇರಿ ಶಂಕರ್‍ಗೆ ಲಂಗ ತೊಡಿಸಿ, ಅರ್ಧ ತಲೆ ಬೋಳಿಸಿ ಊರು ತುಂಬ ಮೆರವಣಿಗೆ ಮಾಡಿದ್ದಾರೆ.

ಈ ಘಟನೆ ಜುಲೈ 11 ರಂದು ನಡೆದಿದದ್ದು ತಡವಾಗಿ ಬೆಳಕಿಗೆ ಬಂದಿದೆ. ದೇವರಹಿಪ್ಪರಗಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ. ಆರೋಪಿ ಶಂಕರ್‍ನನ್ನು ಬಂಧಿಸಿದ್ದು ಪೊಲೀಸರು ತನಿಖೆ ಮಂದುವರೆಸಿದ್ದಾರೆ.

https://youtu.be/E56QglLzlbM

Share This Article
Leave a Comment

Leave a Reply

Your email address will not be published. Required fields are marked *