ಅಕ್ಕನ ಸಾವಿಗೆ ಪತಿಯೇ ಕಾರಣವೆಂದು ಭಾವನನ್ನು ಕೊಚ್ಚಿ ಕೊಂದ ಬಾಮೈದ

Public TV
1 Min Read

ಬೆಂಗಳೂರು: ಅಕ್ಕನನ್ನು ಕೊಂದ ಅನ್ನೋ ದ್ವೇಷಕ್ಕೆ ಬಾಮೈದನೇ ಭಾವನನ್ನು ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಕೆ.ಆರ್ ಪುರಂನ ಚಿಕ್ಕದೇವಸಂದ್ರದಲ್ಲಿ ನಡೆದಿದೆ.

ಚಲುವರಾಯ(35) ಕೊಲೆಯಾದ ವ್ಯಕ್ತಿ. ಈತನ ಮೊದಲ ಹೆಂಡತಿ ತಮ್ಮ ರಾಜಕುಮಾರನಿಂದ ಈ ಕೃತ್ಯ ನಡೆದಿದೆ. 10 ವರ್ಷಗಳ ಹಿಂದೆ ಚಲುವರಾಯನ ಪತ್ನಿ ಮಂಜುಳ ಆತ್ಮಹತ್ಯೆ ಮಾಡಿಕೊಂಡಿದ್ದು ಈಕೆ ಸಾವಿಗೆ ಪತಿಯೇ ಕಾರಣ ಅಂತಾ ಕುಟುಂಬಸ್ಥರು ದೂರು ನೀಡಿದ್ರು. ಪ್ರಕರಣ ಸಂಬಂಧ ಚಲುವರಾಯ 2 ವರ್ಷ ಜೈಲು ಶಿಕ್ಷೆ ಅನುಭವಿಸಿ ಹೊರಗೆ ಬಂದು ಮತ್ತೊಂದು ಮದುವೆಯಾಗಿದ್ದ.

ಅಕ್ಕನನ್ನು ಕೊಂದ ಅನ್ನೋ ಸೇಡು ಹೊಂದಿದ್ದ ರಾಜಕುಮಾರ ತನ್ನ ಸ್ನೇಹಿತರೊಂದಿಗೆ ಸೇರಿ ಭಾವನ ವಿರುದ್ಧ ಸ್ಕೆಚ್ ಹಾಕಿ ಮನೆಗೆ ಕರೆಸಿಕೊಂಡು ಕಣ್ಣಿಗೆ ಖಾರದ ಪುಡಿ ಎರಚಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾನೆ.

ಪ್ರಕರಣ ಸಂಬಂಧ ಕೆ.ಆರ್ ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *