ಮಂಗಳೂರಲ್ಲಿ ಐವರು ಮಹಿಳೆಯರಿಗೆ ಕೈಕೊಟ್ಟ ಭೂಪ

Public TV
1 Min Read

ಮಂಗಳೂರು: ವಿಕೃತ ಕಾಮಿಯೊಬ್ಬ ಮದುವೆಯಾಗೋದಾಗಿ ನಂಬಿಸಿ ಐದಕ್ಕೂ ಹೆಚ್ಚು ಮಹಿಳೆಯರನ್ನು ಯಾಮಾರಿಸಿದ್ದಾನೆ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ದಿನೇಶ್ ಮಣಿಯಾಣಿ ಎಂಬಾತ ಮದುವೆಯಾಗೋದಾಗಿ ಹೇಳಿ ದೈಹಿಕ ಸಂಪರ್ಕ ಬೆಳೆಸಿ, ಮೋಸ ಮಾಡಿದ್ದಾನೆ.

ಪತಿಯನ್ನ ಕಳೆದುಕೊಂಡಿರುವ ಪುತ್ತೂರು ಮೂಲದ ಮಹಿಳೆಯೊಬ್ಬರನ್ನು ಪುಸಲಾಯಿಸಿದ್ದ ದಿನೇಶ್, ಮದುವೆಯಾಗುವುದಾಗಿ ನಂಬಿಸಿ ದೇಹ ಸಂಪರ್ಕ ಬೆಳೆಸಿದ್ದಲ್ಲದೆ, ಆಕೆಯಿಂದ 7 ಲಕ್ಷ ರೂಪಾಯಿ ಲಪಟಾಯಿಸಿದ್ದಾನೆ.

ವಾಹನ ಖರೀದಿಸಿ, ಟ್ಯಾಕ್ಸಿ ಮಾಡೋಣವೆಂದು ಹಣ ತೆಗೆದುಕೊಂಡಿದ್ದ ದಿನೇಶ್, ಬಳಿಕ ನಾಪತ್ತೆಯಾಗಿದ್ದಾನೆ. ಇದಕ್ಕೂ ಮುನ್ನ ಬಂಟ್ವಾಳ, ಮಂಗಳೂರು, ಪುತ್ತೂರಿನಲ್ಲಿ ನಾಲ್ಕು ಕಡೆ ಮದುವೆಯಾಗಿರುವ ವಿಚಾರ ಮಹಿಳೆಗೆ ಗೊತ್ತಾಗಿದೆ. ಹೀಗಾಗಿ ವಂಚನೆಗೆ ಒಳಗಾದ ಮಹಿಳೆ, ಪೊಲೀಸ್ ದೂರು ನೀಡಲು ಮುಂದಾದಾಗ ದಿನೇಶ ಜೀವ ಬೆದರಿಕೆ ಹಾಕಿದ್ದಾನೆ. ಹೀಗಾಗಿ ಸಂತ್ರಸ್ತ ಮಹಿಳೆ ಅತ್ತ ಪೊಲೀಸರಿಂದಲೂ ನ್ಯಾಯ ದೊರಕಿಲ್ಲವೆಂದು ಮಾಧ್ಯಮದ ಮುಂದೆ ಬಂದಿದ್ದು, ತಾನು ಸತ್ತರೆ ದಿನೇಶ ಮತ್ತು ಪೊಲೀಸರೇ ಕಾರಣ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *