ತಾಯಿ, ಪತ್ನಿ, ಮಗಳೆನ್ನದೇ ಸಿಕ್ಕ ಸಿಕ್ಕವರ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ್ದಾತ ಪೊಲೀಸರ ವಶಕ್ಕೆ!

Public TV
1 Min Read

ಚಿಕ್ಕಮಗಳೂರು: ತನ್ನ ಕುಟುಂಬಸ್ಥರು ಸೇರಿದಂತೆ ಸಿಕ್ಕ ಸಿಕ್ಕವರ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಗುಡ್ಡೇತೋಟ ಗ್ರಾಮದಲ್ಲಿ ಘಟನೆ ನಡೆದಿದೆ.

ರವಿ ಎಂಬಾತನೇ ಮಚ್ಚಿನಿಂದ ಹಲ್ಲೆಗೈದ ವ್ಯಕ್ತಿ. ತಾಯಿ, ಪತ್ನಿ, ಮಗಳು, ಅತ್ತಿಗೆ ಸೇರಿದಂತೆ ಪಕ್ಕದ ಮನೆಯವರ ಮೇಲೆಯೂ ರವಿ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಏಕಾಏಕಿ ಮನೆಗೆ ನುಗ್ಗಿದ ರವಿ ಎದುರಿಗೆ ಸಿಕ್ಕವರ ಮೇಲೆ ಮಚ್ಚಿನಿಂದ ದಾಳಿ ನಡೆಸಿದ್ದಾನೆ. ರವಿ ಪತ್ನಿ ಸುಜಾತ, ಮಗಳು ರಶ್ಮಿಕಾ, ತಾಯಿ ಲಕ್ಷ್ಮಿ, ಅತ್ತಿಗೆ ವಿನೋಧ, ಪಕ್ಕದ ಮನೆಯ ಶಾರದ ಹಲ್ಲೆಗೊಳಗಾದವರು.

ಕೂಡಲೇ ಗ್ರಾಮಸ್ಥರು ರವಿಯನ್ನು ಸೆರೆ ಹಿಡಿದು ಥಳಿಸಿ ಸ್ಥಳೀಯರು ಪೊಲೀಸರ ವಶಕ್ಕೆ ನೀಡಿದ್ದಾರೆ. ಮಚ್ಚಿನೇಟು ತಿಂದು ಗಂಭೀರ ಗಾಯಗೊಂಡ ಆರು ಜನ ವಿವಿಧ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Share This Article
Leave a Comment

Leave a Reply

Your email address will not be published. Required fields are marked *