ಸಿಎಂ ಕುಮಾರಸ್ವಾಮಿಗೆ ಮತ ಹಾಕಿದ ಜನ ಉಗಿಯುತ್ತಿದ್ದಾರೆ: ಏಕವಚನದಲ್ಲೇ ಕೆಬಿ ಚಂದ್ರಶೇಖರ್ ವಾಗ್ದಾಳಿ

Public TV
1 Min Read

ಮಂಡ್ಯ: ಸಿಎಂ ಕುಮಾರಸ್ವಾಮಿಗೆ ಮತ ಹಾಕಿದ್ದ ಜನ ಈಗ ಉಗುಯುತ್ತಿದ್ದಾರೆ ಎಂದು ಹಿರಿಯ ಕೈ ಮುಖಂಡ ಹಾಗೂ ಕೆ.ಆರ್.ಪೇಟೆ ಕ್ಷೇತ್ರದ ಪರಾಜಿತ ಅಭ್ಯರ್ಥಿಯಾದ ಕೆ.ಬಿ.ಚಂದ್ರಶೇಖರ್ ಹೇಳಿದ್ದಾರೆ.

ಜಿಲ್ಲೆಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿ ಅವರು, ಕುಮಾರಸ್ವಾಮಿ ರೈತರ ಸಾಲ ಮನ್ನಾ ಮಾಡ್ತಾರೆ ಅಂತ ಜನ ಮತ ಹಾಕಿದ್ದರು. ಆದರೆ ಸಿಎಂ ಆದ ಮೇಲೆ ಕುಮಾರಸ್ವಾಮಿ ಏನು ಅನ್ನೋದು ಜನಕ್ಕೆ ಗೊತ್ತಾಗಿದೆ. ಬಹಳ ಜನ ಮಹಿಳೆಯರು ಸಾಲ ಮನ್ನಾ ಆಗುತ್ತೆ ಎಂದು ಕುಮಾರಸ್ವಾಮಿಗೆ ಮತ ಹಾಕಿದ್ದರು. ಈಗ ಕುಮಾರಸ್ವಾಮಿ ವಿರುದ್ಧ ತಿರುಗಿ ಬಿದ್ದಿದ್ದಾರೆ ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದರು.

ಅಲ್ಲದೇ ಚುನಾವಣೆ ಸಂದರ್ಭದಲ್ಲಿ ನನ್ನ ಕ್ಷೇತ್ರದ ಕೆಲ ಬೂತ್ ನಲ್ಲಿ ಜೆಡಿಎಸ್ ಏಜೆಂಟ್ ಗಳೇ ಇರಲಿಲ್ಲ. ಪ್ರತಿ ಬೂತ್ ನಲ್ಲಿ ಕಾಂಗ್ರೆಸ್ ಕಾರ್ಯಕರ್ತರು 50 ರಿಂದ 100 ಮಂದಿ ಇದ್ದರು. ಆದರೆ ಜೆಡಿಎಸ್ ಕೇವಲ ಇಬ್ಬರು, ಮೂರು ಮಂದಿ ಮಾತ್ರ ಇದ್ದರು ಎಂದು ವ್ಯಂಗ್ಯಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *