ಬುಲೆಟ್ ಟ್ರೈನ್ ಆಸೆಗಾಗಿ ಬಿಜೆಪಿಗೆ ಮತ: ಅಖಿಲೇಶ್ ಸಿಂಗ್ ಯಾದವ್

Public TV
1 Min Read

ನವದೆಹಲಿ: ಜನರ ನಿರ್ಧಾರವನ್ನು ಸ್ವೀಕಾರ ಮಾಡ್ತೇವೆ. ಮತಯಂತ್ರದ ದೋಷದ ಬಗ್ಗೆ ತನಿಖೆಯಾಗ್ಬೇಕು ಅಂತಾ ಮಾಯಾವತಿ ಹಾಕಿದ ಪ್ರಶ್ನೆಯನ್ನೇ ಅಖಿಲೇಶ್ ಸಿಂಗ್ ಯಾದವ್ ಕೂಡ ಎತ್ತಿದ್ದಾರೆ.

ಹೀನಾಯ ಸೋಲು ಕಂಡ ಈ ಹಿನ್ನೆಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅಖಿಲೇಶ್ ಸಿಂಗ್ ಯಾದವ್, ಉತ್ತರಪ್ರದೇಶದ ಯುವಕರು ಮತದಾರರಿಗೆ ಇಷ್ಟವಾಗಲಿಲ್ಲ. ಕಳೆದ 5 ವರ್ಷಗಳಲ್ಲಿ ಸಾಕಷ್ಟು ಕೆಲಸ ಮಾಡಿದ್ದೇವೆ. 1,600 ಕೋಟಿ ರೂ. ಮೊತ್ತದಷ್ಟು ರೈತರ ಸಾಲ ಮನ್ನಾ ಮಾಡಿದ್ದೇವೆ. ಆದ್ರೆ ಕಾಂಗ್ರೆಸ್ ಜೊತೆಗಿನ ಮೈತ್ರಿ ಮುಂದುವರೆಯಲಿದೆ. ರಾಜ್ಯದ ಜನ ಬುಲೆಟ್ ಟ್ರೈನ್‍ಗಾಗಿ ಬಿಜೆಪಿಗೆ ಮತ ಹಾಕಿರಬಹುದು ಅಂತಾ ಎಂದು ಹೇಳಿದರು.

ಹೆಸರು ಒಂದೇ ಜನ ಬೇರೆ: ಸಿಎಂ ಆಗಿದ್ದ ಅಖಿಲೇಶ್ ಸಿಂಗ್ ಯಾದವ್ ಉತ್ತರಪ್ರದೇಶದಲ್ಲಿ ಚುನಾವಣೆಗೆ ಸ್ಫರ್ಧಿಸಿಲ್ಲ.ಮುಬಾರಕ್‍ಪುರದಲ್ಲಿ ಸೋತಿದ್ದು ಸಿಎಂ ಅಖಿಲೇಶ್ ಅಲ್ಲ. ಎಸ್‍ಪಿ ಪಕ್ಷದ ಅಭ್ಯರ್ಥಿ ಅಖಿಲೇಶ್ ಯಾದವ್ ಸೋತಿದ್ದಾರೆ. ಅಖಿಲೇಶ್ ಯಾದವ್ ಎಂಎಲ್‍ಸಿಯಾಗಿ ರಾಜ್ಯದ ಚುಕ್ಕಾಣಿ ಹಿಡಿದಿದ್ದರು.

ರಾಜೀನಾಮೆ: ಉತ್ತರಪ್ರದೇಶದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಅಖಿಲೇಶ್ ಯಾದವ್ ರಾಜೀನಾಮೆ ಸಲ್ಲಿಸಿದ್ದಾರೆ. ಇಂದು ಸಂಜೆ ರಾಜ್ಯಪಾಲರನ್ನು ಭೇಟಿಯಾದ ಅಖಿಲೇಶ್ ತಮ್ಮ ರಾಜೀನಾಮೆ ಪತ್ರವನ್ನು ನೀಡಿದ್ದಾರೆ.

ಉತ್ತರಪ್ರದೇಶದಲ್ಲಿ ಬಿಜೆಪಿ 324 ಹಾಗೂ ಎಸ್‍ಪಿ, ಕಾಂಗ್ರೆಸ್ 54, ಬಿಎಸ್‍ಪಿ 20, ಇತರೆ 05 ಸ್ಥಾನಗಳನ್ನು ಗಳಿಸಿದೆ.

ಇದನ್ನೂ ಓದಿ: ಇವಿಎಂ ದೋಷದಿಂದ ಬಿಜೆಪಿಗೆ ಗೆಲುವು, ಬ್ಯಾಲೆಟ್ ಪೇಪರ್‍ನಲ್ಲಿ ಮತ್ತೊಮ್ಮೆ ಚುನಾವಣೆ ನಡೆಸಿ: ಮಾಯಾವತಿ

ಇದನ್ನೂ ಓದಿ: ಉತ್ತರ ಪ್ರದೇಶದ ಫಲಿತಾಂಶಕ್ಕೂ ರಾಜ್ಯದ ಚುನಾವಣೆಗೂ ಸಂಬಂಧವಿಲ್ಲ: ದಿನೇಶ್ ಗುಂಡೂರಾವ್

ಇದನ್ನೂ ಓದಿ: ಮೋದಿಯ ಒನ್ ಮ್ಯಾನ್ ಶೋ ಕೆಲಸ ಮಾಡಿದೆ: ಎಚ್‍ಡಿಡಿ

Share This Article
Leave a Comment

Leave a Reply

Your email address will not be published. Required fields are marked *