ಕಲಘಟಗಿಯಲ್ಲಿ ಲಾಡ್‍ಗೆ ಮತ್ತೆ ತರಾಟೆ – ಮೈಸೂರಿನಲ್ಲಿ ಖರ್ಗೆಗೆ ಪ್ರಶ್ನೆಗಳ ಸುರಿಮಳೆ – ಸಿವಿ ರಾಮನ್‍ನಗರ ಶಾಸಕರಿಗೆ ಫುಲ್ ಕ್ಲಾಸ್

Public TV
1 Min Read

ಮೋದಿ 15 ಲಕ್ಷ ಅಕೌಂಟ್‍ಗೆ ಹಾಕಿದ್ನಾ- ಏಕವಚನದಲ್ಲೇ ಗ್ರಾಮಸ್ಥರಿಂದ ಸಂತೋಷ್ ಲಾಡ್ ಗೆ ಪ್ರಶ್ನೆ

ಬೆಂಗಳೂರು: ಸಚಿವ ಸಂತೋಷ್ ಲಾಡ್ ಕಲಘಟಗಿ ಕ್ಷೇತ್ರದ ಪ್ರಚಾರಕ್ಕೆ ಹೋದಾಗಲೆಲ್ಲಾ ತೀವ್ರ ಮುಖಭಂಗ ಅನುಭವಿಸ್ತಿದ್ದಾರೆ. ಗ್ರಾಮದ ಸಮಸ್ಯೆಗಳನ್ನ ಇತ್ಯಥ್ರ್ಯ ಮಾಡಿಲ್ಲ ಅಂತ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗ್ರಾಮಸ್ಥರು ಮೋದಿ ಮೋದಿ ಅಂತ ಘೋಷಣೆ ಕೂಗಿದ್ದಕ್ಕೆ ಸಿಟ್ಟಾದ ಲಾಡ್, ಮೋದಿ 15 ಲಕ್ಷ ಅಕೌಂಟ್‍ಗೆ ಹಾಕಿದ್ನಾ ಎಂದು ಏಕವಚನದಲ್ಲೇ ಪ್ರಶ್ನಿಸಿದ್ರು. ಈ ವೇಳೆ ಲಾಡ್ ಹಾಗೂ ಗ್ರಾಮಸ್ಥರ ನಡುವೆ ತೀವ್ರ ಮಾತಿನ ಚಕಮಕಿ ನಡೆಯಿತು.

ಮೈಸೂರಿನಲ್ಲಿ ರೋಡ್‍ಶೋ ನಡೆಸುತ್ತಿದ್ದ ಮಲ್ಲಿಕಾರ್ಜುನ್ ಖರ್ಗೆಗೆ ಸ್ಥಳೀಯ ದಲಿತ ಮುಖಂಡರು ಪ್ರಶ್ನೆಗಳ ಸುರಿಮಳೆಗೈದ್ರು. ಎಲ್ಲಾ ಕ್ಷೇತ್ರದಲ್ಲಿ ದಲಿತರು ಕಾಂಗ್ರೆಸ್‍ಗೆ ವೋಟ್ ಹಾಕ್ತೀವಿ. ಆದ್ರೆ ಪರಮೇಶ್ವರ್ ಕ್ಷೇತ್ರದಲ್ಲಿ ಸಿಎಂ ಸಮುದಾಯದವರು ಯಾಕೆ ಕಾಂಗ್ರೆಸ್‍ಗೆ ವೋಟ್ ಹಾಕಲ್ಲ ಅಂತ ಪ್ರಶ್ನಿಸಿದ್ರು. ಅಶೋಕಪುರಂನಲ್ಲಿ ಖರ್ಗೆ ಪ್ರಚಾರ ವಾಹನ ತಡೆದ ಯುವಕನೊಬ್ಬ ದಲಿತ ಮುಖ್ಯಮಂತ್ರಿಗಾಗಿ ಆಗ್ರಹಿಸಿದ್ರು.

ಇತ್ತ ಬೆಂಗಳೂರಿನ ಸಿವಿ ರಾಮನ್‍ನಗರದಲ್ಲಿ ವೋಟ್ ಕೇಳಲು ಹೋದ ಬಿಜೆಪಿ ಅಭ್ಯರ್ಥಿ, ಶಾಸಕ ರಘು ಅವರಿಗೆ ಜನ ಚಳಿ ಬಿಡಿಸಿದ್ರು. ಎಲೆಕ್ಷನ್ ಟೈಂನಲ್ಲಿ ಮನೆ ಹುಡ್ಕೊಂಡು ಬರ್ತೀರಾ, ಬೇರೆ ಟೈಂನಲ್ಲಿ ಕೈಗೆ ಸಿಗಲ್ಲ ಅಂತಾ ಜನ ಗರಂ ಆದ್ರು. ಈ ವೇಳೆ ಶಾಸಕರು ಬಾಯ್ತಪ್ಪಿ ವೋಟು ಬೇಡ ಹೋಗ್ರಿ ಅಂದಿದ್ದಾರೆ. ಕೊನೆಗೆ ಜನ್ರ ಆಕ್ರೋಶಕ್ಕೆ ಬೆದರಿದ ಶಾಸಕರು ಸ್ಥಳದಿಂದ ಕಾಲ್ಕಿತ್ತರು.

Share This Article
Leave a Comment

Leave a Reply

Your email address will not be published. Required fields are marked *