ಹಾಸನಾಂಬೆಯ ದರ್ಶನ ಪಡೆದ ಪೇಜಾವರ ಶ್ರೀ

Public TV
0 Min Read

ಹಾಸನ: ಉಡುಪಿಯ ಪೇಜಾವರ ಶ್ರೀಗಳು (Pejavara Vishwaprasanna Tirtha Swamiji) ಹಾಸನಾಂಬೆ (Hasanamba) ದರ್ಶನ ಪಡೆದಿದ್ದಾರೆ. ಈ ವೇಳೆ ಭಕ್ತರಿಗೆ ಹಾಸನಾಂಬೆ ದೇವಿ ಬದುಕಿನುದ್ದಕ್ಕೂ ರಕ್ಷಣೆ ಕೊಡಲಿ ಎಂದು ಶುಭಹಾರೈಸಿದ್ದಾರೆ.

ಪೇಜಾವರ ಶ್ರೀಗಳಿಗೆ ಜಿಲ್ಲಾಡಳಿತದಿಂದ ಈ ವೇಲೆ ಗೌರವ ಸಮರ್ಪಣೆ ಮಾಡಲಾಯಿತು. ಬಳಿಕ ಶ್ರೀಗಳ ಕಾಲಿಗೆ ನಮಸ್ಕರಿಸಿ ಜಿಲ್ಲಾಧಿಕಾರಿ ಸತ್ಯಭಾಮ ಅವರು ಆಶೀರ್ವಾದ ಪಡೆದರು.

ಶ್ರೀಗಳ ಜೊತೆ ಡಿಸಿ ಹಾಗೂ ಸಕಲೇಶಪುರದ ತಹಶೀಲ್ದಾರ್‌ ಫೋಟೋ ಕ್ಲಿಕ್ಕಿಸಿಕೊಂಡರು. ಇಷ್ಟೇ ಅಲ್ಲದೇ ಭಕ್ತರು ಸಹ ಶ್ರೀಗಳ ಜೊತೆ ಫೋಟೋ ತೆಗೆಸಿಕೊಳ್ಳಲು ಮುಗಿಬಿದ್ದಿದ್ದಾರೆ. ಕೆಲ ಭಕ್ತರ ಜೊತೆ ಶ್ರೀಗಳು ಫೋಟೋ ತೆಗೆಸಿಕೊಂಡು ಬಳಿಕ ತೆರಳಿದ್ದಾರೆ.

Share This Article