ಬೀದರ್: ಸಾಮಾನ್ಯವಾಗಿ ಅಧಿಕಾರಿಗಳು, ಜನಪ್ರತಿನಿಧಿಗಳು ಅಂದ್ರೆ ಕಚ್ಚಾಟವೇ ಜಾಸ್ತಿ ಇರತ್ತೆ. ಆದ್ರೆ, ಇವತ್ತಿನ ಪಬ್ಲಿಕ್ ಹೀರೋ ಸ್ವಲ್ಪ ವಿಭಿನ್ನವಾಗಿದ್ದಾರೆ. ಬೀದರ್ ನ ಔರಾದ್ ತಾಲೂಕಿನ ಚಿಂತಾಕಿ ಗ್ರಾಮ ಪಂಚಾಯ್ತಿಯ ಪಿಡಿಒ ಮತ್ತು ಜನಪ್ರತಿನಿಧಿಗಳು ಬಯಲು ಮುಕ್ತ ಶೌಚಾಲಯ ನಿರ್ಮಿಸುವಲ್ಲಿ ಟೊಂಕಕಟ್ಟಿ ಯಶಸ್ವಿಯಾಗ್ತಿದ್ದಾರೆ.
ಅಧಿಕಾರಿಗಳು, ಜನಪ್ರತಿನಿಧಿಗಳು ಮನಸ್ಸು ಮಾಡಿದ್ರೆ ಏನುಬೇಕಾದ್ರೂ ಮಾಡಬಹುದು ಅನ್ನೋದಕ್ಕೆ ಬೀದರ್ ನ ಓರಾದ್ ತಾಲೂಕಿನ ಚಿಂತಾಕಿ ಗ್ರಾಮ ಪಂಚಾಯ್ತಿ ಸಾಕ್ಷಿ. ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಐದು ಗ್ರಾಮಗಳನ್ನ ಬಯಲು ಮುಕ್ತ ಶೌಚಾಲಯ ಮಾಡಬೇಕೆಂದು ಪಿಡಿಒ ಶಿವಾನಂದ ಚಂದ್ರಕಾಂತ್ ಔರಾದೆ ಹಾಗೂ ಅಧ್ಯಕ್ಷ ವಿರಾರೆಡ್ಡಿ ಮತ್ತವರ ತಂಡ ಪಣ ತೊಟ್ಟಿದೆ.
ಐದು ಗ್ರಾಮಗಳಲ್ಲಿ ಒಟ್ಟು 20 ಸಾವಿರ ಜನವಿದ್ದು ಈಗಾಗಲೇ ಬೆಲ್ದಾಳ್, ಲಿಂಗದಗಳ್ಳಿ 2 ಗ್ರಾಮಗಳು ಬಯಲು ಮುಕ್ತ ಶೌಚಾಲಯವಾಗಿವೆ. ಇನ್ನುಳಿದ 3 ಗ್ರಾಮಗಳಲ್ಲಿ ಶೇಕಡಾ 90ರಷ್ಟು ಬಯಲು ಮುಕ್ತ ಶೌಚಾಲಯಗಳ ಕಾಮಗಾರಿ ಮುಕ್ತಾಯದ ಅಂಚಿಗೆ ಬಂದಿದೆ. ಈಗಾಗಲೇ ಮೂರು ತಿಂಗಳಿನಿಂದ ಕಾಲಿಗೆ ಪಾದರಕ್ಷೆ ಹಾಕದೆ ಪ್ರತಿ ಮನೆ ಮನೆಗೆ ತೆರಳಿ ಶೌಚಾಲಯದ ಬಗ್ಗೆ ಜಾಗೃತಿ ಮೂಡಿಸ್ತಿದ್ದಾರೆ.
ಬಯಲು ಮುಕ್ತ ಶೌಚಾಲಯದ ಬಗ್ಗೆ ಪ್ರತಿಯೊಬ್ಬ ಮತದಾರನ ಮನೆಗೆ ಕೊರಿಯರ್ ಮೂಲಕ ಅಂಚೆ ಚೀಟಿಗಳನ್ನು ಕಳಿಸಿ ಜಾಗೃತಿ ಮೂಡಿಸ್ತಿದ್ದಾರೆ. ಮಾತ್ರವಲ್ಲ, ವಿದ್ಯಾರ್ಥಿಗಳ ಮೂಲಕ ಬಿತ್ತಿ ಪತ್ರಗಳನ್ನು ಮನೆ ಮನೆಗೆ ತೆರಳುತ್ತಿದ್ದಾರೆ.
ಇದರ ಜೊತೆಗೆ “ಪಂಚಾಯ್ತಿತಿ ಪರಿಹಾರ” ಎಂಬ ಕಾರ್ಯಕ್ರಮದಲ್ಲಿ ಪ್ರತಿ ವಾರಕ್ಕೆ ಒಂದು ಸಲ ಗ್ರಾಮಕ್ಕೆ ಭೇಟಿ ನೀಡುವ ಈ ತಂಡ ಸಮಸ್ಯೆಗೆ ಪರಿಹಾರ ನೀಡ್ತಿದೆ.
https://www.youtube.com/watch?v=SWJURNYgmLA