ಕರ್ತವ್ಯಕ್ಕೆ ಮರು ನೇಮಕಾತಿ ಮಾಡಿ ಅಂತ ಅಧಿಕಾರಿಗಳ ಜೊತೆ ಪಿಡಿಒ ರಂಪಾಟ

Public TV
1 Min Read

ಬೀದರ್: ಕರ್ತವ್ಯಕ್ಕೆ ಮರು ನೇಮಕಾತಿ ಶಿಫಾರಸು ಮಾಡಿ ನೇಮಕಾತಿ ಮಾಡಿಕೊಳ್ಳಿ ಅಂತಾ ಜಿ.ಪಂ ಕಚೇರಿಗೆ ಬಂದು ಅಧಿಕಾರಿಗಳ ಜೊತೆಗೆ ಪಿಡಿಒ ರಂಪಾಟ ಮಾಡಿದ ಘಟನೆ ನಗರದಲ್ಲಿ ನಡೆದಿದೆ.

ಜಿಲ್ಲಾ ಪಂಚಾಯ್ತಿಯ ಡಿ.ಎಸ್ ವಿಜಯಕುಮಾರ್ ಮಡ್ಡೆ ಕಚೇರಿಗೆ ತೆರಳಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹೊಡೆಯಲು ಯತ್ನ ಮಾಡಿ ಪಿಡಿಒ ರಂಪಾಟ ಮಾಡಿದ್ದಾರೆ. ಜಿಲ್ಲಾ ಪಂಚಾಯ್ತಿ ಕಚೇರಿಗೆ ಬಂದು ಡಿಎಎಸ್ ಜೊತೆ ಗಲಾಟೆ ಮಾಡಿದ ಪಿಡಿಒ ಮಂಗಲಾ ಕಾಂಬಳೆ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ. ಕೆಲವು ತಿಂಗಳ ಹಿಂದೆ ಚಾಂಬೋಳ ಗ್ರಾಮ ಪಂಚಾಯ್ತಿಯಲ್ಲಿ ಪಿಡಿಒ ಆಗಿ ಕಾರ್ಯನಿರ್ವಹಿಸುತ್ತಿದ್ದಾಗ ಗ್ರಾ.ಪಂಯಲ್ಲಿ ಯಾವುದೇ ಜನಪರ ಕೆಲಸ ಮಾಡುತ್ತಿಲ್ಲ ಎಂದು ಸಾರ್ವಜನಿಕರು ಹಾಗೂ ಸದಸ್ಯರು ಆರೋಪ ಮಾಡಿದರು. ಇದನ್ನೂ ಓದಿ: ಉಪಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಮುಖಭಂಗ, ಬಿಜೆಪಿಯಿಂದ ಸ್ಪರ್ಧಿಸಿದ ಗಂಡ-ಹೆಂಡತಿ ಜಯಭೇರಿ

ವಿವಿಧ ಆರೋಪದ ಹಿನ್ನೆಲೆ ಸಿಇಒ ಪರಿಶೀಲನೆ ಮಾಡಿ ಕ್ರಮಕ್ಕೆ ಮುಂದಾದಾಗ ಆಗಲೂ ಹಾಲಿ ಸಿಇಓ ಜಹೀರಾ ನಸೀಮ್ ಅವರಿಗೂ ಅವಾಚ್ಯ ಪದದಿಂದ ಬೈದು ಹೊಡೆದ ಹಿನ್ನೆಲೆ ನೂತನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ವಿವಿಧ ಆರೋಪ ಹೊತ್ತಿದ ಪಿಡಿಒ ಮಂಗಳಾಗೆ ಸರ್ಕಾರದ ಆದೇಶದಂತೆ ಹಲವು ತಿಂಗಳ ಹಿಂದೆ ಅಮಾನತು ಮಾಡಲಾಗಿತ್ತು. ಇದನ್ನೂ ಓದಿ: ಅಪಘಾತದಲ್ಲಿ ಮೃತಪಟ್ಟ 9 ಮಂದಿಯ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ಘೋಷಣೆ

Share This Article
Leave a Comment

Leave a Reply

Your email address will not be published. Required fields are marked *