ಅತ್ತಿಗೆ ಮಾಡಿದ ದ್ರೋಹದಿಂದ ಇಲ್ಲಿದ್ದೇನೆ ಎಂದು ವರಸೆ ಬದಲಿಸಿದ ಪವನ್ ಕಲ್ಯಾಣ್

Public TV
1 Min Read

ಟಾಲಿವುಡ್ (Tollywood) ನಟ ಪವನ್ ಕಲ್ಯಾಣ್ (Pawan Kalyan) ಮತ್ತೊಮ್ಮೆ ಹಳೇ ದಿನ ನೆನಪು ಮಾಡಿಕೊಂಡಿದ್ದಾರೆ. ಸಿನಿಮಾ ಹೀರೋ ಆಗಬೇಕೆನ್ನುವ ಕನಸು ಇರದಿದ್ದ ಹೊತ್ತಿನಲ್ಲಿ ಅದ್ಯಾರು ಈ ಲೋಕಕ್ಕೆ ದೂಡಿದರು? ಅದ್ಯಾಕೆ ಸ್ಟಾರ್ ಮಾಡುವ ದ್ರೋಹ ಮಾಡಿದರೆಂದು ತಮಾಷೆಯಾಗಿ ಹೇಳಿದ್ದಾರೆ. ಹಾಗಿದ್ದರೆ ಪವನ್ ಪ್ರಕಾರ ಆ ದ್ರೋಹಿ ಯಾರು? ಇಲ್ಲಿದೆ ಡಿಟೈಲ್ಸ್

ಪವನ್‌ಕಲ್ಯಾಣ್ ಇಂದು ಕೋಟಿ ಕೋಟಿ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ರಾಜಕೀಯಕ್ಕೂ ಎಂಟ್ರಿ ಕೊಟ್ಟಿದ್ದಾರೆ. ಆದರೆ ನಿಜ ಹೇಳಬೇಕೆಂದರೆ ಅವರಿಗೆ ಸಿನಿಮಾ ಆಸಕ್ತಿ ಅಗುಳಿನಷ್ಟೂ ಇರಲಿಲ್ಲ. ವ್ಯವಸಾಯ ಮಾಡಿಕೊಂಡು…ಆಧ್ಯಾತ್ಮ ಓದಿಕೊಂದು ಬದುಕು ನಡೆಸುವ ಕನಸು ಕಂಡಿದ್ದರು. ಆದರೆ ಸಿನಿಮಾಕ್ಕೆ ಬರುವಂತೆ ಮಾಡಿದ್ದು ಯಾರು ಗೊತ್ತೆ? ಇದನ್ನೂ ಓದಿ:‘ಜವಾನ್’ ಸಿನಿಮಾದಲ್ಲಿ ದಳಪತಿ ವಿಜಯ್ ಕೂಡ ಇದ್ದಾರೆ: ಭರ್ಜರಿ ಸುದ್ದಿ

ಸಾಮಾನ್ಯ ಜೀವನ ನಡೆಸುವ ಕನಸು ಕಂಡಿದ್ದೆ. ಜನಜಂಗುಳಿ ಇಷ್ಟ ಆಗುತ್ತಿರಲಿಲ್ಲ. ಆದರೆ ನನ್ನ ಅಣ್ಣ-ಅತ್ತಿಗೆ ಸಿನಿಮಾಕ್ಕೆ ಹೋಗುವಂತೆ ಮಾಡಿದರು. ಒಮ್ಮೆ ಥೇಟರ್ ಮುಂದೆ ಲಾರಿ ಏರಿ ಕುಣಿಯುವಂತೆ ಜನರು ಒತ್ತಾಯಿಸಿದರು. ಆಗ ನಾನು ಸತ್ತೇ ಹೋಗುತ್ತೇನೆ ಎನ್ನುವಷ್ಟು ಸಂಕೋಚವಾಗಿತ್ತು. ಅತ್ತಿಗೆ ಫೋನ್ ಮಾಡಿ…ಯಾಕೆ ನನ್ನನ್ನು ಇಲ್ಲಿಗೆ ಕಳಿಸಿದಿರಿ ಎಂದು ದಬಾಯಿಸಿದೆ. ಇಷ್ಟು ದೊಡ್ಡ ಹೀರೊ…ಇಷ್ಟು ಫ್ಯಾನ್ಸ್ ಸಿಗುತ್ತಾರೆಂದು ಕನಸಲ್ಲೂ ಊಹಿಸಿರಲಿಲ್ಲ. ಇದಕ್ಕೆಲ್ಲ ನನ್ನ ಅತ್ತಿಗೆ ಮಾಡಿದ ಆ ದ್ರೋಹವೇ ಕಾರಣ ಎಂದು ಪವನ್ ಕಲ್ಯಾಣ್ ಮಾತನಾಡಿದ್ದಾರೆ.

ಅಣ್ಣ ಚಿರು (Chiranjeevi) ಹಾಗೂ ಅತ್ತಿಗೆ ಸುರೇಖಾ (Surekha) ಅಂದರೆ ಪವನ್‌ಗೆ ಪ್ರಾಣ. ಅವರಿಂದಲೇ ಇಂದು ಪವನ್ ಎಷ್ಟೋ ಅವಘಡಗಳಿಂದ ಪಾರಾಗಿ ಇಂದು ಇಷ್ಟು ಎತ್ತರಕ್ಕೆ ಏರಿದ್ದಾರೆ. ಅದನ್ನೇ ‘ಬ್ರೋ’ (Bro) ಸಿನಿಮಾ ಪ್ರಿ ರಿಲೀಸ್ ಇವೆಂಟ್ ಸಮಯದಲ್ಲಿ ತಮಾಷೆಯಾಗಿ ಹೇಳಿದರು. ನೋಡಿ ಎಲ್ಲರೂ ಬಯಸೋದು…ಇವರಿಗೆ ಬೇಡವಾಗಿತ್ತು. ದೇವರ ಆಟ ಬಲ್ಲರ‍್ಯಾರು?

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್