ಭಾರತ್ ಬಂದ್- ಪಬ್ಲಿಕ್ ಟಿವಿ ವಾಹನದಲ್ಲಿ ರೋಗಿ ಆಸ್ಪತ್ರೆಗೆ ರವಾನೆ

Public TV
1 Min Read

ಗದಗ: ಎರಡು ದಿನ ಕಾರ್ಮಿಕರ ಮುಷ್ಕರ ಹಿನ್ನೆಲೆಯಲ್ಲಿ ಗದಗ ಕೇಂದ್ರ ಬಸ್ ನಿಲ್ದಾಣದಲ್ಲಿ ರೋಗಿ ಪರದಾಡುತ್ತಿದ್ದು, ಅವರನ್ನು ಪಬ್ಲಿಕ್ ಟಿವಿ ವಾಹನದ ಮೂಲಕ ಆಸ್ಪತ್ರೆಗೆ ಕಳುಹಿಸಲಾಗಿದೆ.

ರಾಜಶೇಖರ್ ಪಾಶ್ರ್ವವಾಯು ರೋಗದಿಂದ ಬಳಲುತ್ತಿದ್ದರು. ಅಲ್ಲದೇ ಕಲಬುರಗಿ ಜಿಲ್ಲೆಯಿಂದ ಬಂದ ಅವರು ಗದಗ ಕೇಂದ್ರ ಬಸ್ ನಿಲ್ದಾಣದಲ್ಲಿ ಪರದಾಡುತ್ತಿದ್ದರು. ಆಸ್ಪತ್ರೆಗೆ ಹೋಗಲು ರಾಜಶೇಖರ್ ಬಸ್ ಇಲ್ಲದೇ ಬಸ್ ನಿಲ್ದಾಣದಲ್ಲಿ ಪರದಾಡುತ್ತಿದ್ದರು. ಅಲ್ಲದೇ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಆಟೋ ಚಾಲಕರು 400 ರಿಂದ 800 ರೂಪಾಯಿ ಬೇಡಿಕೆ ಇಟ್ಟಿದ್ದರು.

ಆಳಂದ ತಾಲೂಕಿನ ಅಲ್ಲದಾಪೂರ ಗ್ರಾಮದ ಪುತ್ರ ರಾಜಶೇಖರ್ ತಮ್ಮ ತಾಯಿ ಜೊತೆ ಚಿಕಿತ್ಸೆಗೆ ಗದಗ ತಾಲೂಕಿನ ಸೊರಟೂರ ಗ್ರಾಮಕ್ಕೆ ಚಿಕಿತ್ಸೆಗೆ ಆಗಮಿಸಿದ್ದರು. ಬಸ್ ಇಲ್ಲದೇ ನಿಲ್ದಾಣದಲ್ಲಿ ಪರದಾಡುತ್ತಿದ್ದರು. ಈ ವೇಳೆ ಪಬ್ಲಿಕ್ ಟಿವಿ ವಾಹನ ಮೂಲಕ ಗದಗ ನಿಂದ ಸೋರಟೂರ ಆಸ್ಪತ್ರೆಗೆ ರಾಜಶೇಖರ್ ಅವರನ್ನು ರವಾನಿಸಲಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *