ರೈಲ್ವೇ ಇಲಾಖೆ ವಿರುದ್ಧ ಘೋಷಣೆ ಕೂಗಿ, ಪ್ರಯಾಣಿಕರಿಂದ ಪ್ರತಿಭಟನೆ!

Public TV
1 Min Read

ತುಮಕೂರು: ರೈಲೊಂದು ಕ್ರಾಸಿಂಗ್ ಮಾಡಲು ಸುಮಾರು ಒಂದೂವರೆ ಗಂಟೆ ಕಾದಿದ್ದರಿಂದ ರೊಚ್ಚಿಗೆದ್ದ ಪ್ರಯಾಣಿಕರು ರೇಲ್ವೇ ಹಳಿ ಮೇಲೆ ಪ್ರತಿಭಟನೆ ನಡೆಸಿ, ರೈಲು ಇಂಜಿನ್ ಗೆ ಕಲ್ಲು ತೂರಾಟ ನಡೆಸಿದ್ದಾರೆ.

ತುಮಕೂರಿನ ಮಲ್ಲಸಂದ್ರದಲ್ಲಿ ಬೆಂಗಳೂರು-ಅರಸೀಕೆರೆ ಪ್ಯಾಸೆಂಜರ್ ಪ್ರಯಾಣಿಕರು ಈ ರೀತಿ ರೊಚ್ಚಿಗೆದ್ದಿದ್ದಾರೆ. ಹುಬ್ಬಳ್ಳಿ-ಬೆಂಗಳೂರು ಪ್ಯಾಸೆಂಜರ್ ರೈಲು ರಾತ್ರಿ 8-30ಕ್ಕೆ ಕ್ರಾಸ್ ಮಾಡಬೇಕಿತ್ತು. ಆದರೆ ರಾತ್ರಿ 10 ಗಂಟೆಯಾದರೂ ಕ್ರಾಸ್ ಮಾಡಿರಲಿಲ್ಲ. ಒಂದೂವರೆ ಗಂಟೆಗಳ ಕಾಲ ವಿಳಂಬವಾದ್ದರಿಂದ ರೊಚ್ಚಿಗೆದ್ದ ಅರಸಿಕೆರೆ ಪ್ರಯಾಣಿಕರು ರೇಲ್ವೇ ಇಲಾಖೆ ವಿರುದ್ಧ ಘೋಷಣೆ ಕೂಗಿ, ಕಲ್ಲು ತೂರಾಟ ನಡೆಸಿ ಪ್ರತಿಭಟನೆ ನಡೆಸಿದ್ದಾರೆ.

ಬಳಿಕ ತುಮಕೂರು ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. 10 ಗಂಟೆಗೆ ಹುಬ್ಬಳ್ಳಿ-ಬೆಂಗಳೂರು ಮಾರ್ಗದ ರೈಲು ಕ್ರಾಸ್ ಆದ ಬಳಿಕ ಅರಸಿಕೆರೆ ರೈಲು ಹೊರಟಿತು.

Share This Article
Leave a Comment

Leave a Reply

Your email address will not be published. Required fields are marked *