ಬಳ್ಳಾರಿ/ಕೊಪ್ಪಳ: ಕಲ್ಯಾಣ ಕರ್ನಾಟಕದ ಜೀವನಾಡಿ ತುಂಗಭದ್ರಾ ಜಲಾಶಯ (Tungabhadra Dam) ಭಾಗಶಃ ಭರ್ತಿಯಾಗಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.ಇದನ್ನೂ ಓದಿ: ಸ್ವಾಮೀಜಿಗಳು ಹೇಳಿಕೆ ನೀಡುವುದು ಅವರ ವೈಯಕ್ತಿಕ ಅಭಿಪ್ರಾಯ – ರಂಭಾಪುರಿ ಶ್ರೀ ಹೇಳಿಕೆಗೆ ಸಚಿವ ಚೆಲುವರಾಯಸ್ವಾಮಿ ಪ್ರತಿಕ್ರಿಯೆ
ಬಳ್ಳಾರಿ (Ballary) ಜಿಲ್ಲೆಯ ಹೊಸಪೇಟೆ (Hosapete) ಹೊರವಲಯದ ಹಾಗೂ ಕೊಪ್ಪಳದ (Koppal) ಮುನಿರಾಬಾದ್ ಬಳಿಯಿರುವ ಡಿಬಿ ಡ್ಯಾಂ (TB Dam) 105 ಟಿಎಂಸಿ ಗರಿಷ್ಟ ಸಂಗ್ರಹ ಸಾಮರ್ಥ್ಯ ಹೊಂದಿದ್ದು, ಇದೀಗ 77 ಟಿಎಂಸಿ ನೀರು ಸಂಗ್ರಹವಾಗಿದೆ. ಸದ್ಯ ಜಲಾಶಯದ ಸುರಕ್ಷತಾ ದೃಷ್ಟಿಯಿಂದ 62 ಸಾವಿರ ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದ್ದು, ಇದರ ಮನಮೋಹಕ ದೃಶ್ಯ÷ಗಳು `ಪಬ್ಲಿಕ್ ಟಿವಿ’ ಕ್ಯಾಮೆರಾದಲ್ಲಿ ಸೆರೆಯಾಗಿವೆ.
ಜಲಾಶಯದ 1ಕಿ.ಮೀ ಮೇಲ್ಭಾಗದಿಂದ ರಮಣೀಯ ನೋಟ ಸೆರೆಯಾಗಿದ್ದು, ಕಣ್ಮನ ಸೆಳೆಯುತ್ತಿದೆ. 1,633 ಅಡಿ ಗರಿಷ್ಠ ಮಟ್ಟದ ಜಲಾಶಯದಲ್ಲಿ ಇಂದು 1,625.07 ಅಡಿ ನೀರಿದ್ದು, 54,500 ಕ್ಯೂಸೆಕ್ ಒಳಹರಿವು ಇದೆ.ಇದನ್ನೂ ಓದಿ: ಸ್ಯಾಮ್ಸಂಗ್ ಗೆಲಾಕ್ಸಿ ಎಸ್25 ಆಲ್ಟ್ರಾ, ಎಸ್24 ಆಲ್ಟ್ರಾ, ಎಸ್23 ಆಲ್ಟ್ರಾ ಬೆಲೆ ದಿಢೀರ್ ಭಾರೀ ಇಳಿಕೆ