ರೋಗಿ ತಾಯಿ ನೋಡಲು ಪೆರೋಲ್‌ ಮೇಲೆ ಹೊರಬಂದಿದ್ದ ಕೈದಿ ಮಗನ ಜೊತೆ ಪರಾರಿ!

Public TV
1 Min Read

ಬಳ್ಳಾರಿ: ರೋಗಿ ತಾಯಿ ನೋಡಲು ಪೆರೋಲ್ ಮೇಲೆ ಹೊರಬಂದಿದ್ದ ಕೈದಿಯೊಬ್ಬ ಮಗನ ಜೊತೆಗೆ ಪರಾರಿಯಾಗಿರುವ ಘಟನೆ ಬಳ್ಳಾರಿ ತಾಲೂಕಿನ ತೆಕ್ಕಲಕೋಟೆಯಲ್ಲಿ ನಡೆದಿದೆ.

ನಾಗೇಶ ಅಲಿಯಾಸ್ ನಾಗಪ್ಪ ಪರಾರಿಯಾದವ. ತೆಕ್ಕಲಕೋಟೆ ಪೊಲೀಸ್ ಠಾಣೆಯ ಪ್ರಕರಣವೊಂದರಲ್ಲಿ ಜಿಲ್ಲಾ ಸತ್ರ ನ್ಯಾಯಾಲಯದಿಂದ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ. ಕೊರಚರ ಪೆರೋಲ್ ರಜೆ ಅವಧಿ ಮುಗಿದರೂ ಸಹ ವಾಪಸ್ ಜೈಲಿಗೆ ಹೋಗದೇ ತಲೆಮರೆಸಿಕೊಂಡಿದ್ದಾನೆ.

ಕೊಲೆ ಪ್ರಕರಣದಲ್ಲಿಈತನನ್ನು ತೆಕ್ಕಲಕೋಟೆ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದರು.  ಜಿಲ್ಲಾ ಸತ್ರ ನ್ಯಾಯಾಲಯವು ನಾಗೇಶ್‍ಗೆ ಜೀವಾ ಅವಧಿ ಶಿಕ್ಷೆ ವಿಧಿಸಿತ್ತು. ಸುಮಾರು 8 ವರ್ಷಗಳವರೆಗೆ ಜೈಲಿನಲ್ಲಿ ಸಜಾಬಂದಿಯಾಗಿದ್ದನು. ಜ.20ರಂದು ತನ್ನ ತಾಯಿ ಆರೋಗ್ಯ ವಿಚಾರಣೆ ಸಲುವಾಗಿ 15ದಿನ ಪೆರೋಲ್ ರಜೆಯ ಮೇಲೆ ಹೋಗಿರುತ್ತಾನೆ. ಇದನ್ನೂ ಓದಿ:  ಪುಷ್ಪ ಮಾಸ್ ಡೈಲಾಗ್ ಹೇಳಿದ ಡೇವಿಡ್ ವಾರ್ನರ್- Viral Video

ಪೆರೋಲ್ ರಜೆಯ ಮೇಲೆ ಹೊರ ಬಂದ ನಾಗೇಶ ಅಲಿಯಾಸ್ ನಾಗಪ್ಪ ಮರಳಿ ಜೈಲಿಗೆ ಬರದೇ ತಲೆಮರಿಸಿಕೊಂಡಿದ್ದಾನೆ. ಈತನಿಗಾಗಿ ಪೊಲೀಸರು ಹಡುಕಾಟ ನಡೆಸಿದ್ದಾರೆ. ಇದನ್ನೂ ಓದಿ: ಬಿಕಿನಿ ತೊಟ್ಟು ಪಡ್ಡೆಗಳ ಹಾರ್ಟ್‍ಬಿಟ್ ಹೆಚ್ಚಿಸಿದ ಮಾಳವಿಕಾ ಮೋಹನನ್

Share This Article
Leave a Comment

Leave a Reply

Your email address will not be published. Required fields are marked *