ಮಕ್ಕಳನ್ನು ನೋಡಲು ಬರುತ್ತಿದ್ದಾಗ ಅಪಘಾತ- ಕಾರ್ ನಜ್ಜುಗುಜ್ಜಾದ್ರೂ ಪೋಷಕರು ಬಚಾವ್

Public TV
1 Min Read

ಬೆಂಗಳೂರು: ಸಾಲು ಸಾಲು ರಜೆ ಇದ್ದ ಕಾರಣ ತಮ್ಮ ಮಕ್ಕಳನ್ನು ನೋಡಲು ಬೆಂಗಳೂರು ಕಡೆ ಪ್ರಯಾಣ ಬೆಳೆಸಿದ್ದ ಪೋಷಕರ ಕಾರ್ ಅಪಘಾತಕ್ಕೀಡಾಗಿ ಪವಾಡ ರೀತಿಯಲ್ಲಿ ಪಾರಾದ ಘಟನೆಯೊಂದು ಇಂದು ಬೆಳಗ್ಗೆ ನಡೆದಿದೆ.

ಈ ಘಟನೆ ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 4 ರ ದೇವರಹೊಸಹಳ್ಳಿ ಮೇಲ್ ಸೇತುವೆ ಬಳಿ ನಡೆದಿದೆ. ಕಾರು ಮತ್ತು ಲಾರಿ ಮಧ್ಯೆ ಅಪಘಾತ ಸಂಭವಿಸಿದೆ.

ಅಪಘಾತದ ರಭಸಕ್ಕೆ ಕಾರ್ ಸಂಪೂರ್ಣವಾಗಿ ನಜ್ಜು ಗುಜ್ಜಾಗಿ ರಸ್ತೆ ಸೇತುವೆಯ ಬ್ಯಾರಿಕೇಡ್ ಗೆ ಗುದ್ದಿದೆ. ಸೇತುವೆ ಬಳಿ ಬ್ಯಾರಿಕೇಡ್ ಅಳವಡಿಸಿದ್ದರಿಂದ ಭಾರೀ ಅನಾಹುತವೊಂದು ತಪ್ಪಿದೆ ಅಂತ ಸ್ಥಳೀಯರು ಹೇಳುತ್ತಿದ್ದಾರೆ.

ನೆಲಮಂಗಲ ಸಂಚಾರಿ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *