ಪರಮೇಶ್ವರ್ ನಾಯ್ಕ್ ದರ್ಬಾರ್: ಪ್ರಕಟಣೆಯಾದ ದಿನವೇ ಟೆಂಡರ್ ಮುಕ್ತಾಯ- ಗೋಲ್ಮಾಲ್ ಬಯಲಾದ್ಮೇಲೆ ದಾಖಲೆಗಳೇ ಮಾಯ

Public TV
1 Min Read

ಬಳ್ಳಾರಿ: ಮಾಜಿ ಸಚಿವ, ಹಾಲಿ ಶಾಸಕ ಪರಮೇಶ್ವರ್ ನಾಯ್ಕ್ ಆಡಿದ್ದೇ ಆಟ ಮಾಡಿದ್ದೇ ಕಾನೂನು ಎಂಬಂತಾಗಿದೆ. ಸಾಮಾನ್ಯವಾಗಿ ಟೆಂಡರ್ ಕರೆಯೋಕೆ ಅದರದ್ದೇ ಆದ ರೂಲ್ಸ್ ಗಳಿವೆ. ಆದ್ರೆ ಬಳ್ಳಾರಿಯಲ್ಲಿ ಮಾತ್ರ ಈ ರೂಲ್ಸ್ ಯಾವ ಲೆಕ್ಕಕ್ಕೂ ಇಲ್ಲ.

ಹೂವಿನಹಡಗಲಿಯ ಮಾನ್ಯರ ಮಸಲವಾಡ, ಕೊಯಿಲಾರಗಟ್ಟಿ ಗ್ರಾಮಗಳ ಕೆರೆ ಹೂಳೆತ್ತುವ ಕಾಮಗಾರಿಗೆ ಅಧಿಕಾರಿಗಳು, ಹಾಲಿ ಶಾಸಕ ಪರಮೇಶ್ವರ್ ನಾಯ್ಕ್ ಟೆಂಡರ್ ಕರೆದು ಅದ್ರ ಜಾಹೀರಾತನ್ನ ಈ ಸಂಜೆ ಪತ್ರಿಕೆಯಲ್ಲಿ ಪ್ರಕಟಿಸಿದ್ರು. ವಿಚಿತ್ರ ಅಂದ್ರೆ ಅದೇ ಸಂಜೆ ಟೆಂಡರ್ ಸಹ ಮುಗಿದುಹೋಗಿದೆ. ಈ ಬಗ್ಗೆ ಸೋಗಿ ಜಿಲ್ಲಾ ಪಂಚಾಯತ್ ಸದಸ್ಯ ವಿಶ್ವನಾಥ ದಾಖಲೆ ಸಮೇತ ಜಿಲ್ಲಾ ಪಂಚಾಯತ ಸಿಇಓಗೆ ದೂರು ಸಲ್ಲಿಸಿದ್ದಾರೆ.

ಇನ್ನೊಂದು ವಿಚಿತ್ರ ಅಂದ್ರೆ ಅಕ್ರಮ ಬಯಲಾಗ್ತಿದ್ದಂತೆ ದಾಖಲೆಗಳು ಸಹ ನಾಪತ್ತೆಯಾಗಿದೆ. ಕಳ್ಳತನವಾಗಿರುವ ಟೆಂಡರ್ ಪ್ರಕಟಣೆಯ ದಾಖಲೆಗಳನ್ನು ಜಿಲ್ಲಾ ಪಂಚಾಯತ್ ಮುಂದೆ ಹಾಜರುಪಡಿಸುವಂತೆ ಸಿಇಓ ಆದೇಶ ನೀಡಿದ್ದಾರೆ. ಇನ್ನು ಈ ಬಗ್ಗೆ ಸೂಕ್ತ ತನಿಖೆಗೆ ಸ್ಥಳೀಯರು ಆಗ್ರಹಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *