ಪರಮೇಶ್ವರ್ ಈಸ್ ಬ್ಲಡಿ ನಾನ್ಸೆನ್ಸ್: ಶಾಸಕ ಸುಧಾಕರ್ ಲಾಲ್ ಪುತ್ರ ಕಮೆಂಟ್ ವಿವಾದ

Public TV
1 Min Read

ತುಮಕೂರು: ಫೇಸ್ ಬುಕ್‍ ನಲ್ಲಿ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಬಗ್ಗೆ ಕೊರಟಗೆರೆಯ ಜೆಡಿಎಸ್ ಶಾಸಕ ಸುಧಾಕರ್ ಪುತ್ರ ಸುಚಾರಿತ್ ಲಾಲ್ ಹಾಕಿರುವ ಕಮೆಂಟ್ ಈಗ ವಿವಾದಕ್ಕೆ ಕಾರಣವಾಗಿದೆ.

ತನ್ನ ಫೇಸ್ ಬುಕ್ ನಲ್ಲಿ ಡಾ. ಜಿ.ಪರಮೇಶ್ವರ್ ಅವರನ್ನು “ಬ್ಲಡಿ ನಾನ್ ಸೆನ್ಸ್” ಎಂದು ಸಂಭೋದಿಸಿದ್ದಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶಗೊಂಡಿದ್ದಾರೆ.

ಕೊರಟಗೆರೆ ಕ್ಷೇತ್ರದ ಮುಂದಿನ ಚುನಾವಣೆಯಲ್ಲಿ ಪರಮೇಶ್ವರ್ ಗೆಲ್ಲುತ್ತಾರೆ ಎಂಬ ಸಿ-04 ಸಮೀಕ್ಷೆಯೊಂದನ್ನು ಪೋಸ್ಟ್ ಮಾಡಿದ್ದವರ ಕಾಮೆಂಟ್ ಬಾಕ್ಸ್ ನಲ್ಲಿ ಸುಚಾರಿತ್ ಲಾಲ್, ಪರಮೇಶ್ವರ್ ‘ಈಸ್ ಎ ಬ್ಲಡಿ ನಾನ್ ಸೆನ್ಸ್’ ಎಂದು ಕಾಮೆಂಟ್ ಮಾಡಿ ಈಗ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.

ಈ ಚರ್ಚೆಯ ವೇಳೆ ಸಿಎಚ್‍ಎಸ್ ಸಮೀಕ್ಷೆ ಪ್ರಕಾರ ತನ್ನ ತಂದೆ ಸುಧಾಕರ್ ಲಾಲ್ ಗೆಲ್ಲುತ್ತಾರೆ ಎಂದು ಪೋಸ್ಟ್ ಮಾಡಿದ್ದಕ್ಕೆ, ಕಾಂಗ್ರೆಸ್ ಕಾರ್ಯಕರ್ತರು ಸುಚಾರಿತ್ ಕಾಮೆಂಟ್ ನ ವೈರಲ್ ಮಾಡಿ ಶಾಸಕರ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *