ಗುಜರಾತ್‌ ಪ್ರವಾಸೋದ್ಯಮ ಇಲಾಖೆಗೆ ಟ್ವೀಟ್‌ನಲ್ಲೇ ಉತ್ತರಿಸುತ್ತೇವೆ: ಆನಂದ್‌ ಸಿಂಗ್‌

Public TV
1 Min Read

ಕೊಪ್ಪಳ: ಟ್ವೀಟ್‌ ಮಾಡಿದವರಿಗೆ ಉತ್ತರ ಕೊಡಲು ಆಗುವುದಿಲ್ಲ ಎಂದು ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌ ಹೇಳಿದ್ದಾರೆ.

ಪಂಪ ಸರೋವರ ಗುಜರಾತ್‌ನಲ್ಲಿದೆ ಎಂಬ ಗುಜರಾತ್‌ ಪ್ರವಾಸೋದ್ಯಮ ಇಲಾಖೆಯ ಟ್ವೀಟ್‌ಗೆ ಪ್ರತಿಕ್ರಿಯಿಸಿದ ಅವರು, ಪ್ರವಾಸೋದ್ಯಮ ಇಲಾಖೆ ಟ್ವೀಟ್ ಮಾಡಿದರೆ ಅದಕ್ಕೆ ನಾವು ಟ್ವೀಟ್‌ನಲ್ಲೇ ಉತ್ತರ ಕೊಡುತ್ತೇವೆ ಎಂದು ತಿಳಿಸಿದರು.

ಅಂಜನಾದ್ರಿ ಯಲ್ಲಿ ಆದಷ್ಟು ಬೇಗ ಅಭಿವೃದ್ಧಿ ಕೆಲಸ ನಡೆಯಲಿದೆ. ಬೊಮ್ಮಾಯಿ ಅವರಿಗೆ ಬೆಟ್ಟ ಹತ್ತಲು ಕಷ್ಟವಾಗುವ ಕಾರಣ ಅಂಜನಾದ್ರಿಯನ್ನು ವೈಮಾನಿಕವಾಗಿ ವೀಕ್ಷಣೆ ಮಾಡಲಿದ್ದಾರೆ. ಪ್ರವಾಸೋದ್ಯಮ ಇಲಾಖೆಯಿಂದ ಅಭಿವೃದ್ಧಿಗಾಗಿ ಏಜೆನ್ಸಿಗಳನ್ನು ಕರೆಯಲಾಗುತ್ತಿದೆ. ನಾವು ಆದಷ್ಟು ಬೇಗ ನೀಲ ನಕ್ಷೆ ತಯಾರಿಸುತ್ತೇವೆ ಎಂದು ಆನಂದ್ ಸಿಂಗ್‌ ತಿಳಿಸಿದರು. ಇದನ್ನೂ ಓದಿ: ತಾಯಿಯಾದವಳು ಮಗು ಮತ್ತು ತನ್ನ ವೃತ್ತಿಜೀವನದ ಮಧ್ಯೆ ಆಯ್ಕೆಯನ್ನು ಕೇಳಬಾರದು: ಹೈಕೋರ್ಟ್‌

ಟ್ವೀಟ್‌ನಲ್ಲಿ ಏನಿತ್ತು?
ಶ್ರೀರಾಮನು ತನ್ನ ವನವಾಸದ ಸಮಯದಲ್ಲಿ ಮಾತೆ ಶಬರಿಯನ್ನು ಭೇಟಿಯಾದ ಕಥೆಗಳಿಂದ ಆವೃತವಾಗಿರುವ ಕೆರೆ. ಶಾಂತಿಯುತ ನೈಸರ್ಗಿಕ ಸೌಂದರ್ಯದಿಂದ ಕೂಡಿರುವ ಪಂಪಾ ಸರೋವರ ನಿಮಗಾಗಿ ಕಾಯುತ್ತಿದೆ ಎಂದು ಬರೆದು ಡ್ಯಾಂಗ್ ಜಿಲ್ಲೆಯಲ್ಲಿರುವ ಸರೋವರದ ಫೋಟೋವನ್ನು ಜುಲೈ 11 ರಂದು ಟ್ವೀಟ್‌ ಮಾಡಿತ್ತು.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *