ರಾಜಕೀಯ ಪ್ರವೇಶದ ಕುರಿತು ಕೊನೆಗೂ ಸ್ಪಷ್ಟನೆ ನೀಡಿದ್ರು ಪಲಿಮಾರು ಶ್ರೀಗಳು

Public TV
1 Min Read

ಉಡುಪಿ: ನಾನು ರಾಜಕೀಯ ಪ್ರವೇಶ ಮಾಡುವುದಿಲ್ಲ. ನಾನು ರಾಜಕೀಯಕ್ಕೆ ಬರುತ್ತೇನೆ ಎಂಬ ಸುದ್ದಿಯೇ ಬಹಳ ಆಘಾತಕಾರಿ ಎಂದು ಉಡುಪಿ ಪಲಿಮಾರು ಮಠಾಧೀಶ ವಿದ್ಯಾಧೀಶ ಸ್ವಾಮೀಜಿಗಳು ಸ್ಪಷ್ಟಪಡಿಸಿದ್ದಾರೆ.

ಉಡುಪಿಯಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸ್ವಾಮೀಜಿ, ನಾನು ಸ್ವಪ್ನದಲ್ಲೂ ರಾಜಕೀಯಕ್ಕೆ ಬರುವ ಬಗ್ಗೆ ಆಲೋಚಿಸಿಲ್ಲ. ರಾಜಕೀಯ ನನ್ನ ಕ್ಷೇತ್ರವೂ ಅಲ್ಲ. ನಾನು ಧರ್ಮ ಪೀಠದಲ್ಲಿದ್ದೇನೆ. ಧಾರ್ಮಿಕವಾಗಿ ಮಾಡಬೇಕಾದ ಕೆಲಸ ಸಾಕಷ್ಟು ಬಾಕಿಯಿದೆ. ರಾಜಕೀಯದವರು ಧರ್ಮ ಪೀಠಕ್ಕೆ ಮಣಿಯುತ್ತಾರೆ. ನಾನು ಏಕೆ ರಾಜಕೀಯ ಕ್ಷೇತ್ರಕ್ಕೆ ಪ್ರವೇಶಿಸಲಿ ಎಂದು ಪ್ರಶ್ನಿಸಿದರು.

ತಾನು ರಾಜಕೀಯ ಪ್ರವೇಶ ಮಾಡುತ್ತೇನೆ ಎಂಬುವುದು ಕಲ್ಪಿತವಾದ ವಿಚಾರ. ಖಂಡಿತವಾಗಿ ನಾನು ರಾಜಕೀಯ ಪ್ರವೇಶ ನಿರಾಕರಣೆ ಮಾಡುತ್ತಿದ್ದೇನೆ. ಯಾವ ರಾಜಕಾರಣಿಗಳೂ ನನ್ನನ್ನು ಇದುವರೆಗೂ ಸಂಪರ್ಕಿಸಿಯೇ ಇಲ್ಲ. ಸಂಪರ್ಕಿಸಿದರೂ ನಾನು ಒಪ್ಪುವ ಪ್ರಶ್ನೆಯೇ ಇಲ್ಲ. ಈ ಬಗ್ಗೆ ಮುಂದೆ ಪ್ರಚಾರ ಕೂಡಾ ಬೇಡ. ಆದರೆ ಇಂತಹ ಸುದ್ದಿಯಿಂದ ನನ್ನ ಮನಸ್ಸಿಗೆ ಬಹಳ ನೋವಾಗಿದೆ ಎಂದರು.

ಹಲವು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿಯಿಂದ ರಾಜ್ಯದ ಐದು ಮಠಾಧೀಶರಿಗೆ ಟಿಕೆಟ್ ಎಂಬುವುದಾಗಿ ಸುದ್ದಿಯಾಗಿತ್ತು. ಈ ಕುರಿತು ಪ್ರತಿಕ್ರಿಯೆ ನೀಡಿದ ಪಾಲಿಮಾರು ಶ್ರೀ ಗಳು ರಾಜಕೀಯ ಪ್ರವೇಶ ಮಾಡುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *