ರಾಜಸ್ಥಾನದ ದೇವಾಲಯಗಳಿಂದ ಪಾಕ್ ಉಗ್ರರಿಗೆ ಹಣ ರವಾನೆ!

Public TV
1 Min Read

– ಜನರ ನಂಬಿಕೆಯ ಜೊತೆ ಪಾಕ್ ಐಎಸ್‍ಐ ಆಟ
– ಕಾಣಿಕೆ ಹುಂಡಿಯಲ್ಲಿ ಸಂಗ್ರಹವಾದ ಹಣ ಉಗ್ರರಿಗೆ ಸಂದಾಯ

ಜೈಪುರ: ರಾಜಸ್ಥಾನ ಹೆಸರು ಕೇಳಿದರೆ ಸಾಕು, ಎಲ್ಲರಿಗೂ ನೆನಪಾಗುವುದು ಅಲ್ಲಿನ ಅರಮನೆಗಳು ಮತ್ತು ಮನಮೋಹಕ ಸಂಸ್ಕೃತಿ ವಿಚಾರಗಳು. ಆದರೆ ಈಗ ಅಲ್ಲಿನ ಗ್ರಾಮಗಳ ದೇವಾಲಯಗಳಿಂದ ಪಾಕಿಸ್ತಾನದ ಉಗ್ರರಿಗೆ ಹಣ ರವಾನೆಯಾಗುತ್ತಿರುವ ಶಾಕಿಂಗ್ ವಿಚಾರ ಕೇಳಿಬಂದಿದೆ.

ಪಾಕಿಸ್ತಾನದಲ್ಲಿನ ಭಯೋತ್ಪಾದಕರಿಗೆ ರಾಜಸ್ಥಾನ ಗಡಿ ಭಾಗದ ಹಳ್ಳಿಗಳ ದೇವಾಲಯಗಳಿಂದ ಹಣ ಸಂಗ್ರಹವಾಗುತ್ತಿದೆ ಎಂಬ ಮಾಹಿತಿ ಈಗ ಗುಪ್ತಚರ ಇಲಾಖೆಯಿಂದ ಬಹಿರಂಗವಾಗಿದೆ.

ಭಕ್ತರು ದೇವಾಲಯಗಳಲ್ಲಿ ಕಾಣಿಕೆ ಹಾಕುತ್ತಾರೆ ಎನ್ನುವುದು ಎಲ್ಲಿರಿಗೂ ತಿಳಿದಿರುವ ವಿಚಾರ. ಈಗ ಭಕ್ತರ ನಂಬಿಕೆಯ ಮೇಲೆ ಪಾಕಿಸ್ತಾನ ಗೂಢಚರ್ಯೆ ಸಂಸ್ಥೆ ಐಎಸ್‍ಐ ಆಟವಾಡುತ್ತಿದ್ದು, ಐಎಸ್‍ಐನ ಏಜೆಂಟ್ ಗಳು ರಾಜಸ್ಥಾನದ ಗಡಿಯಲ್ಲಿರುವ ಕೆಲವು ಹಳ್ಳಿಗಳ ದೇವಾಲಯಗಳಲ್ಲಿ ಕಾಣಕೆ ಹುಂಡಿಯನ್ನು ಇರಿಸಿದ್ದಾರೆ. ಇಲ್ಲಿ ಸಂಗ್ರಹವಾದ ಹಣ ನೇರವಾಗಿ ಉಗ್ರರ ಕೈ ಸೇರುತ್ತಿದೆ ಎನ್ನುವ ಅಂಶವನ್ನು ರಾಜಸ್ಥಾನ ಗುಪ್ತಚರ ಇಲಾಖೆ ತಿಳಿಸಿದೆ.

ಪತ್ತೆಯಾಗಿದ್ದು ಹೇಗೆ?
ಕಳೆದ ವಾರ ಬಾರ್ಮರ್ ಜಿಲ್ಲೆಯ ಗಡಿಭಾಗದ ಗ್ರಾಮವೊಂದರಲ್ಲಿ ಐಎಸ್‍ಐ ಎಜೆಂಟ್ ದೀನಾ ಖಾನ್ ಎಂಬಾತನನ್ನು ರಾಜಸ್ಥಾನ ಪೊಲೀಸರು ಬಂಧಿಸಿದ್ದರು. ಆತನ ವಿಚಾರಣೆ ವೇಳೆ ಚೋತನ್ ಎಂಬ ಹಳ್ಳಿಯಲ್ಲಿ ಸುಮಾರು 3.5 ಲಕ್ಷ ರೂ. ಕಾಣಿಕೆ ಹುಂಡಿಯಿಂದ ದೇಣಿಗೆ ಸಂಗ್ರಹ ಮಾಡಿ ನಾನು ಹಂಚಿದ್ದೇನೆ ಎಂದು ಹೇಳಿದ್ದಾನೆ.

ದೀನಾ ಖಾನ್‍ನನ್ನು ನಿಯಂತ್ರಿಸುತ್ತಿದ್ದ ವ್ಯಕ್ತಿಗಳು ಆತನಿಗೆ ಕರೆ ಮಾಡಿ ಹಣವನ್ನು ಹಂಚುವುಂತೆ ನಿರ್ದೇಶಿಸಿದ್ದರು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕಾಣಿಕೆ ಹುಂಡಿಯೇ ಯಾಕೆ?
ಹವಾಲಾ ಮೂಲಕ ಹಣ ಸಾಗಿಸಲು ಈಗ ತುಂಬಾ ಕಷ್ಟವಾಗಿದೆ. ಅಲ್ಲದೇ ಇದರಿಂದ ಸಿಕ್ಕಿಬೀಳುವ ಅಪಾಯ ಹೆಚ್ಚು. ಹೀಗಾಗಿ ಸುಲಭವಾಗಿ ಹಣ ಸಂಗ್ರಹ ಮಾಡಲು ಕಾಣಿಕೆ ಹುಂಡಿಗಳನ್ನು ಇಡುತ್ತಿದ್ದೇವೆ ಎಂದು ಆತ ತಿಳಿಸಿದ್ದಾನೆ.

ರಾಜಸ್ಥಾನ ಗಡಿ ಭಾಗದಲ್ಲಿರುವ ಹಲವು ದೇವಾಲಯಗಳಲ್ಲಿ ಉಗ್ರರಿಗೆ ಹಣವನ್ನು ಸಂದಾಯ ಮಾಡಲು ಕಾಣಿಕೆ ಡಬ್ಬಿಗಳನ್ನು ಇಟ್ಟಿದ್ದಾರೆ ಎನ್ನುವ ಶಂಕೆಯನ್ನು ಗುಪ್ತಚರ ಇಲಾಖೆ ವ್ಯಕ್ತಪಡಿಸಿದೆ.

Share This Article
Leave a Comment

Leave a Reply

Your email address will not be published. Required fields are marked *