ಪಡ್ಡೆಹುಲಿಯ ಬಾಯಲ್ಲಿ ಬಸವಣ್ಣನ ವಚನ!

Public TV
1 Min Read

ಬೆಂಗಳೂರು: ಎಂ. ರಮೇಶ್ ರೆಡ್ಡಿ ನಿರ್ಮಾಣ ಮಾಡಿರೋ ಪಡ್ಡೆಹುಲಿ ಚಿತ್ರ ಹಾಡುಗಳ ಮೂಲಕವೇ ಹುಟ್ಟಿಸಿರೋ ಕ್ರೇಜ್ ಸಣ್ಣದ್ದೇನಲ್ಲ. ಆದರೆ ನಿರ್ದೇಶಕ ಗುರುದೇಶಪಾಂಡೆ ಒಂದರ ಹಿಂದೊಂದರಂತೆ ಹೊಸ ಪ್ರಯೋಗದ, ಎಲ್ಲರನ್ನೂ ಸೆಳೆಯುವಂಥಾ ಹಾಡುಗಳನ್ನು ರೂಪಿಸುತ್ತಲೇ ಇದ್ದಾರೆ. ಇದೀಗ ಮಹಾಶಿವರಾತ್ರಿಯ ಕೊಡುಗೆಯೆಂಬಂತೆ ಬಸವಣ್ಣನವರ ಪ್ರಸಿದ್ಧ ವಚನವೊಂದನ್ನು ಹಾಡಾಗಿಸಿ ಬಿಡುಗಡೆಗೊಳಿಸಿದ್ದಾರೆ.

ಅಜನೀಶ್ ಲೋಕನಾಥ್ ಈ ಮೂಲಕ ಮತ್ತೊಂದು ಕಮಾಲ್ ಸೃಷ್ಟಿಸಿದ್ದಾರೆ. ಬಸವಣ್ಣನವರ ಜನಪ್ರಿಯ ‘ಕಳಬೇಡ ಕೊಲಬೇಡ ಹುಸಿಯ ನುಡಿಯಲು ಬೇಡ’ ಎಂಬ ವಚನಕ್ಕೆ ಯುವ ಸಮುದಾಯವನ್ನು ಆವರಿಸಿಕೊಳ್ಳುವಂಥಾ ಸಂಗೀತ ಸಂಯೋಜನೆ ಮಾಡಿದ್ದಾರೆ. ಜೀವನದ ಅಸಲಿ ಮೌಲ್ಯ ಸಾರುವ ಈ ವಚನವನ್ನು ಯುವ ಸಮುದಾಯಕ್ಕೂ ದಾಟಿಸುವಂಥಾ ಈ ಪ್ರಯತ್ನಕ್ಕೆ ನಾರಾಯಣ ಶರ್ಮಾ ಅದ್ಭುತವಾಗಿಯೇ ಧ್ವನಿಯಾಗಿದ್ದಾರೆ. ಈ ಹಾಡಿನ ಮೂಲಕವೇ ನಾರಾಯಣ ಶರ್ಮಾ ಕನ್ನಡದ ಭರವಸೆಯ ಗಾಯಕರಾಗಿಯೂ ಹೊರ ಹೊಮ್ಮಿದ್ದಾರೆ.

ಇದು ಈಗಿನ ಕಾಲಕ್ಕೆ ತುರ್ತಾಗಿ ಬೇಕಾಗಿದ್ದ ಪ್ರಯತ್ನ. ಇದರ ಮೂಲಕವೇ ಕೆ.ಮಂಜು ಅವರ ಪುತ್ರ ಶ್ರೇಯಸ್ ಮತ್ತೊಂದು ಅಚ್ಚರಿದಾಯಕ ಶೇಡಿನಲ್ಲಿಯೂ ಗಮನ ಸೆಳೆದಿದ್ದಾರೆ. ಈ ಹಾಡು ಮೂಡಿ ಬಂದಿರೋ ರೀತಿಯೇ ಶ್ರದ್ಧೆಗೆ ಯಾವತ್ತಿಗೂ ಸೋಲಿಲ್ಲ ಎಂಬುದಕ್ಕೂ ತಾಜಾ ಉದಾಹರಣೆ. ಒಂದೇ ಗುಕ್ಕಿನಲ್ಲಿ ಒಳಗಿಳಿದು ಬಿಡುವಂತಿರೋ ಈ ಹಾಡು ಬಸವಣ್ಣನವರ ವಚನಗಳನ್ನು ಈ ಪೀಳಿಗೆಗೂ ಪರಿಣಾಮಕಾರಿಯಾಗಿಯೇ ದಾಟಿಸಿರೋದು ನಿಜವಾದ ವಿಶೇಷ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *