ಸಿಎಂಗಿಂತ ಅವರ ಪಿಎ ಸಿಕ್ಕಾಪಟ್ಟೆ ಬ್ಯುಸಿ: ಹುಚ್ಚ ವೆಂಕಟ್

Public TV
1 Min Read

ಬೆಂಗಳೂರು: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗಿಂತ ಅವರ ಪಿಎ ಫುಲ್ ಬ್ಯುಸಿ ಆಗಿದ್ದಾರೆ. ರೈತರ ಸಾಲಮನ್ನಾ ಕುರಿತು ಮುಖ್ಯಮಂತ್ರಿ ಅವರನ್ನು ಭೇಟಿಯಾಗಲು ಬಂದ್ರೆ ಅವರ ಪಿಎ ಕೂಡ ಸಿಗ್ತಾ ಇಲ್ಲ ಅಂತಾ ನಟ, ನಿದೇರ್ಶಕ ಹುಚ್ಚ ವೆಂಕಟ್ ವ್ಯಂಗ್ಯವಾಡಿದ್ದಾರೆ.

ಸಿಎಂ ಜೊತೆ ಮಾತನಾಡಲು ಬಂದ್ರೆ ನನಗೆ ಅನುಮತಿ ನೀಡುತ್ತಿಲ್ಲ. ಇನ್ನು ಜನಸಾಮನ್ಯರ ಕಷ್ಟಗಳನ್ನು ಸಿಎಂ ಹೇಗೆ ಬಗೆಹರಿಸುತ್ತಾರೆ. ಚುನಾವಣಾ ಪ್ರಚಾರದಲ್ಲಿ ನಾನು ರೈತರ ಸಾಲಮನ್ನಾ ಮಾಡ್ತೀನಿ ಅಂತಾ ಹೇಳಿಕೊಂಡು ಬಂದವರು ಇಂದು ಸಿಎಂ ಸ್ಥಾನದಲ್ಲಿದ್ದಾರೆ. ಸಮ್ಮಿಶ್ರ ಸರ್ಕಾರ ರಚನೆಯಾಗಿದೆ ಅಂತಾ ಸಬೂಬು ಹೇಳುವ ಮೂಲಕ ಸಾಲಮನ್ನಾ ನಿರ್ಧಾರದಿಂದ ಹಿಂದೆ ಸರಿಯಬಾರದು. ನಾನು ಕೂಡ ರೈತನ ಮಗ. ಕರ್ನಾಟಕದ ಪ್ರಜೆಯಾಗಿ ಸಿಎಂ ಜೊತೆ ಚರ್ಚಿಸುವ ಹಕ್ಕು ನನಗಿದೆ. ಸ್ಟಾರ್ ಹುಚ್ಚ ವೆಂಕಟ್‍ಗೆ ಸಿಎಂ ಜೊತೆ ಮಾತನಾಡಲು ಅವರ ಪಿಎ ಅನುಮತಿ ನೀಡ್ತಿಲ್ಲ. ನನ್ನ ಎಕ್ಕಡ ಇನ್ಮುಂದೆ ನಾನು ಇಲ್ಲಿಗೆ ಬರೋದಿಲ್ಲ ಅಂತಾ ಹುಚ್ಚ ವೆಂಕಟ್ ಕಿಡಿಕಾರಿದ್ರು.

ಪಿಎಂ ನಮ್ಮನೆಗೆ ಬರಬೇಕು: ನನಗಿಂತ ಸಿಎಂ, ಪಿಎಂ ಯಾರು ದೊಡ್ಡವರಿಲ್ಲ. ಅವರೇ ನಮ್ಮನೆಗೆ ಬರಬೇಕು. ಇದು ದುರಂಹಕಾರದ ಮಾತಲ್ಲ. ಇದು ಹುಚ್ಚ ವೆಂಕಟ್‍ನ ಸ್ಟೈಲ್. ಮೊದಲಿಗೆ ಪ್ರೀತಿ, ಬಳಿಕ ಪ್ರೀತಿಸುವರನ್ನು ಹುಡುಕಿಕೊಂಡು ಹೋಗುತ್ತೇನೆ. ಆದ್ರೆ ಅಲ್ಲಿ ಪ್ರೀತಿ ಸಿಗಲಿಲ್ಲ ಅಂದ್ರೆ ನನ್ನ ಎಕ್ಕಡ ಇನ್ನೊಮ್ಮೆ ಅವರ ಹತ್ರ ಹೋಗಲ್ಲ ಅಂತಾ ಡೈಲಾಗ್ ಮೇಲೆ ಡೈಲಾಗ್ ಹೊಡೆದ್ರು.

ನಾನು ರೈತರ ಪರವಾಗಿದ್ದು, ಹಾಗಾಗಿ ಒಂದು ದಿನ ಲೇಟ್ ಆದ್ರೂ ಪರವಾಗಿಲ್ಲ, ಸಾಲಮನ್ನಾ ಮಾಡಲೇಬೇಕು. ಸಿನಿಮಾದವರಿಂದ ಡೈಲಾಗ್ ತೆಗೆದುಕೊಂಡು ಮಾತನಾಡಬಾರದು. ಡೈಲಾಗ್ ಹೊಡೆದು ರಾಜಕೀಯಕ್ಕೆ ಬಂದಿದ್ದ ಸಿನಿಮಾದವರನ್ನು ಮನೆಯಲ್ಲಿ ಕೂರಿಸಿದ್ದೀನಿ. ನನಗೆ ಜನ, ಸಮಾಜ ಮುಖ್ಯವೇ ಹೊರತು ಸರ್ಕಾರವಲ್ಲ ಅಂತಾ ಹೇಳಿದ್ರು.

Share This Article
Leave a Comment

Leave a Reply

Your email address will not be published. Required fields are marked *