ಯುಜಿಡಿ ಕಾಮಗಾರಿ ಗುಂಡಿಗೆ ಬಿದ್ದು ನರಳಿ ನರಳಿ ಪ್ರಾಣ ಬಿಟ್ಟ ಬಸವ

Public TV
0 Min Read

ಮೈಸೂರು: ಯುಜಿಡಿ ಕಾಮಗಾರಿಯ ಗುಂಡಿಗೆ ಬಿದ್ದು ಬೀದಿ ಎತ್ತು ನರಳಿ ನರಳಿ ಪ್ರಾಣ ಬಿಟ್ಟಿರುವ ಮನಕಲಕುವ ಘಟನೆ ಜಿಲ್ಲೆಯ ಟಿ.ನರಸೀಪುರ ವಿನಾಯಕ ಕಾಲೋನಿಯಲ್ಲಿ ನಡೆದಿದೆ.

ಯುಜಿಡಿ ಕಾಮಗಾರಿ ನಡೆಸಲು ಪುರಸಭೆಯಿಂದ ಮಧ್ಯ ರಸ್ತೆಯಲ್ಲಿ ಗುಂಡಿ ತೆರೆಯಲಾಗಿತ್ತು. ಮಧ್ಯ ರಸ್ತೆಯಲ್ಲಿದ್ದ ಗುಂಡಿಗೆ ಅರಿವಿಲ್ಲದೇ ಬೀದಿ ಬಸವ ಬಿದ್ದಿದ್ದಾನೆ. ಗುಂಡಿಯಿಂದ ಮೇಲಕ್ಕೆ ಬರಲಾರದೇ ನರಳಿ ನರಳಿ ಪ್ರಾಣ ಬಿಟ್ಟಿದ್ದಾನೆ.

ಕಾಮಗಾರಿ ನಡೆಸುತ್ತಿರುವ ಪುರಸಭೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಬಸವ ಪ್ರಾಣ ಕಳೆದುಕೊಂಡಿದ್ದಾನೆ. ಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲಿ ಪುರಸಭೆ ಯಾವುದೇ ತಾತ್ಕಲಿಕ ತಡೆಗೋಡೆಯನ್ನು ನಿರ್ಮಿಸಿರಲಿಲ್ಲ. ಇದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿತ್ತು. ಕೊನೆಗೆ ಸ್ಥಳೀಯರೇ ಸಾವನ್ನಪ್ಪಿದ ಬಸವನನ್ನು ಹೊರ ತೆಗೆದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *