ಪಾಕ್‌ ಉಗ್ರವಾದಕ್ಕೆ ಆಪರೇಷನ್ ಸಿಂಧೂರ ನೇರ ಸಂದೇಶ ರವಾನಿಸಿದೆ: ಸೇನಾ ಮುಖ್ಯಸ್ಥ ಉಪೇಂದ್ರ ದ್ವಿವೇದಿ

Public TV
1 Min Read

ನವದೆಹಲಿ: ಪಾಕಿಸ್ತಾನದ (Pakistan) ಉಗ್ರವಾದಕ್ಕೆ ಆಪರೇಷನ್ ಸಿಂಧೂರ (Operation Sindoor) ನೇರ ಸಂದೇಶ ರವಾನಿಸಿದೆ ಎಂದು ಸೇನಾ ಮುಖ್ಯಸ್ಥ ಉಪೇಂದ್ರ ದ್ವಿವೇದಿ (Upendra Dwivedi) ಹೇಳಿದ್ದಾರೆ.

ಡ್ರಾಸ್‌ನಲ್ಲಿರುವ ಕಾರ್ಗಿಲ್ ಯುದ್ಧ ಸ್ಮಾರಕದಲ್ಲಿ ಕಾರ್ಗಿಲ್ ವಿಜಯ್ ದಿವಸ್‌‌ ಉದ್ದೇಶಿಸಿ‌ ಅವರು ಮಾತನಾಡಿದರು. ಈ ವೇಳೆ, ಆಪರೇಷನ್‌ ಸಿಂಧೂರ ಕಾರ್ಯಾಚರಣೆಯ ಮೂಲಕ ಉಗ್ರರನ್ನು ಬೆಂಬಲಿಸುವವರನ್ನು ಬಿಡುವುದಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ಪಾಕಿಸ್ತಾನಕ್ಕೆ ನೀಡಿದೆ. ಪಹಲ್ಗಾಮ್ ಉಗ್ರ ದಾಳಿಗೆ ಇದು ಪ್ರತಿಕ್ರಿಯೆಯಾಗಿತ್ತು. ಈ ಸಲ ಭಾರತದ ಪ್ರತಿಕ್ರಿಯೆ ಹೇಗಿರುತ್ತದೆ ಎಂದು ಉಗ್ರರ ಬೆಂಬಲಿಗರಿಗೆ ತೋರಿಸಿದೆ ಎಂದಿದ್ದಾರೆ. ಇದನ್ನೂ ಓದಿ: Operation Sindoor – 1 ಬ್ರಹ್ಮೋಸ್‌ ಕ್ಷಿಪಣಿಯ ದರ ಎಷ್ಟು? ಸ್ಪೀಡ್‌ ಎಷ್ಟಿರುತ್ತೆ?

ದೇಶದ ಜನತೆ ತೋರಿಸಿದ ನಂಬಿಕೆ ಮತ್ತು ಸರ್ಕಾರ ನೀಡಿದ ಮುಕ್ತ ಸ್ವಾತಂತ್ರ್ಯದಿಂದ ಭಾರತೀಯ ಸೇನೆ ತಕ್ಕ ಪ್ರತಿಕ್ರಿಯೆ ನೀಡಿತು. ಭಾರತದ ಏಕತೆ, ಸಮಗ್ರತೆ ಮತ್ತು ಸಾರ್ವಭೌಮತ್ವವನ್ನು ಪ್ರಶ್ನಿಸಲು ಅಥವಾ ಜನರಿಗೆ ಹಾನಿ ಮಾಡಲು ಪ್ರಯತ್ನಿಸುವ ಯಾವುದೇ ಶಕ್ತಿಗೆ ಸೂಕ್ತವಾದ ಉತ್ತರವನ್ನೇ ನೀಡಲಾಗುತ್ತದೆ. ಇದು ಭಾರತದ ಹೊಸ ನೀತಿಯಾಗಿದೆ.

ಅಪರೇಷನ್‌ ಸಿಂಧೂರ ಕಾರ್ಯಾಚರಣೆಯಲ್ಲಿ ಸೇನೆಯು ಪಾಕಿಸ್ತಾನದಲ್ಲಿ 9ಕ್ಕೂ ಹೆಚ್ಚಿನ ಭಯೋತ್ಪಾದಕರ ಅಡಗುದಾಣಗಳನ್ನು ನಾಶಪಡಿಸಿತು. ಅಲ್ಲದೇ ಪಾಕಿಸ್ತಾನದ ಪ್ರತಿದಾಳಿಯನ್ನು ಯಶಸ್ವಿಯಾಗಿ ಹಿಮ್ಮೆಟ್ಟಿಸಿತು. ಬಳಿಕ ಭಾರತ ಶಾಂತಿಗೆ ಅವಕಾಶ ನೀಡಿತು, ಆದರೆ ಪಾಕಿಸ್ತಾನ ಹೇಡಿತನಕ್ಕೆ ಮೊರೆ ಹೋಯಿತು ಎಂದು ವ್ಯಂಗ್ಯವಾಡಿದ್ದಾರೆ.

ಇನ್ನೂ ಪ್ರಮುಖ ಘಟಕಗಳಾದ ರುದ್ರ ಬ್ರಿಗೇಡ್ ಮತ್ತು ಭೈರವ ಲೈಟ್ ಕಮಾಂಡೋ ಬೆಟಾಲಿಯನ್ ಅನ್ನು ಸ್ಥಾಪಿಸಲಾಗಿದೆ. ಈ ರುದ್ರ ಬ್ರಿಗೇಡ್ ಸೇನೆಯ ಹೊಸ ಆವೃತ್ತಿಯ ಶಕ್ತಿಯ ಸಂಕೇತವಾಗಿದೆ. ಇದರಲ್ಲಿ ಯುದ್ಧ ಟ್ಯಾಂಕ್, ಫಿರಂಗಿ, ಡ್ರೋನ್ ಘಟಕಗಳು ಮತ್ತು ವಿಶೇಷ ಪಡೆಗಳನ್ನು ಒಂದೇ ಘಟಕದೊಳಗೆ ಸೇರಿಸಲಾಗಿದೆ. ಜೊತೆಗೆ ಈ ವಿಭಿನ್ನ ಶಾಖೆಗಳ ಒಕ್ಕೂಟವು ತ್ವರಿತ ಮತ್ತು ಪರಿಣಾಮಕಾರಿ ದಾಳಿಗೆ ಅನುಕೂಲವಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: Operation Sindoor | ಪಾಕ್ ಉಗ್ರ ತಾಣಗಳ ಮೇಲೆ ಏರ್‌ಸ್ಟ್ರೈಕ್‌ – ವಿಡಿಯೋ ಹಂಚಿಕೊಂಡ ಭಾರತೀಯ ಸೇನೆ

Share This Article