ಜೆಡಿಎಸ್ ಶಾಸಕನ ಪುತ್ರನಿಗೆ ಬಿಎಸ್‍ವೈಯಿಂದ ಮಂತ್ರಿಗಿರಿ ಆಫರ್ – ಆಡಿಯೋದಲ್ಲಿ ಏನಿದೆ?

Public TV
2 Min Read

ಬೆಂಗಳೂರು: ಯಾದಗಿರಿಯ ಗುರುಮಠಕಲ್ ಶಾಸಕ ನಾಗನಗೌಡ ಅವರ ಮಗ ಶರಣಗೌಡ ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರು ಪಕ್ಷಕ್ಕೆ ಆಹ್ವಾನಿಸಿ, ಹಣ ಹಾಗೂ ಸಚಿವ ಸ್ಥಾನದ ಆಮಿಷವೊಡ್ಡಿರುವ ಆಡಿಯೋ ಔಟ್ ಆಗಿದೆ.

ಈ ಆಡಿಯೋವನ್ನು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಇಂದು ಬೆಳಗ್ಗೆ ಸುದ್ದಿಗೋಷ್ಠಿ ನಡೆಸಿ ಬಳಿಕ ಆಡಿಯೋವನ್ನು ಮಧ್ಯಮಗಳಿಗೆ ಬಿಡುಗಡೆ ಮಾಡಿದ್ದಾರೆ. ಬೆಂಗಳೂರಿನಲ್ಲಿ ಬಿಜೆಪಿ ಶಾಸಕರ ಸಭೆ ನಡೆಸಿ ರಾಯಚೂರಿಗೆ ತೆರಳಿದ್ದ ಬಿಎಸ್‍ವೈ ಮಧ್ಯರಾತ್ರಿ ದೇವದುರ್ಗದ ಐಬಿಯಲ್ಲಿ ಕುಳಿತು ಶರಣಗೌಡ ಅವರಿಗೆ ಕರೆ ಮಾಡಿ ಐಬಿಗೆ ಬರಲು ಹೇಳಿ ಡೀಲ್ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.

ನಿನ್ನ ತಂದೆಗೆ ವಯಸ್ಸಾಗಿದೆ. ಹೀಗಾಗಿ ನೀನು ಬಿಜೆಪಿಗೆ ಬಾ. ಬಳಿಕ ನಿನ್ನನ್ನು ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವನನ್ನಾಗಿ ಮಾಡುತ್ತೇವೆ. ನೀನು ಸೀದಾ ಇಂದೇ ಮುಂಬೈಗೆ ಹೋಗು ಎಂದು ಶಾಸಕರ ಪುತ್ರ ಶರಣಗೌಡಗೆ ಆಫರ್ ನೀಡಿದ್ದಾರೆ. ಪೇಮೆಂಟ್ ಬಗ್ಗೆ ಯೋಚನೆ ಮಾಡಬೇಡ. ಸ್ಪೀಕರ್ ಅವರಿಗೂ 50 ಕೋಟಿ ರೂ. ಕೊಟ್ಟು ಬುಕ್ ಮಾಡಲಾಗಿದೆ. ಮೋದಿ ಹಾಗೂ ಅಮಿತ್ ಶಾಗೆ ಹೇಳಿ ಈಗಾಗಲೇ ಎಲ್ಲಾ ವ್ಯವಸ್ಥೆ ಆಗಿದೆ. ಹೀಗಾಗಿ ನಿನಗೆ ಖಾತೆ ಕೊಡ್ತೀವಿ ಎಷ್ಟು ಬೇಕಾದ್ರೂ ದುಡ್ಡು ಮಾಡ್ಕೋ. ನಮ್ಮ ಜೊತೆ ಈಗಾಗಲೇ 16 ಮಂದಿ ಶಾಸಕರಿದ್ದಾರೆ. ನೀನು ಬಂದ್ರೆ 17 ಆಗುತ್ತದೆ ಎಂದು ಬಿಜೆಪಿಯವರು ಆಫರ್ ನೀಡಿರುವುದಾಗಿ ಶರಣಗೌಡ ಇದೇ ವೇಳೆ ತಿಳಿಸಿದ್ದಾರೆ. ಇದನ್ನೂ ಓದಿ: ದೇವದುರ್ಗ ಐಬಿಯಲ್ಲಿ ಬಿಎಸ್‍ವೈಯಿಂದ ಆಪರೇಷನ್ ಕಮಲ – ಸ್ಫೋಟಕ ಆಡಿಯೋ ಔಟ್

ಆಡಿಯೋದಲ್ಲೇನಿದೆ..?
ಬಿಎಸ್‍ವೈ : ಫಾದರ್ ಏಜ್ ಏನು
ಶರಣಗೌಡ : 78
ಬಿಎಸ್‍ವೈ : ಮುಂದೆ ಏನಾದ್ರು ಬಂದ್ರೆ ನೀನೇ ನಿಲುತ್ತಿಯಾ
ಶರಣಗೌಡ : ಏನೋ ನೀವು ಹೇಳಿದ ಹಾಗೆ ಸರ್ ಮುಂದಿನ ಪರಿಸ್ಥಿತಿ ನೋಡಬೇಕಲ್ವ ಸರ್
ಬಿಎಸ್‍ವೈ : ಇನ್ನೇನು 4 ದಿನದಲ್ಲಿ ಎಲ್ಲಾ ಮುಗಿದು ಹೋಗುತ್ತೆ. ನಮ್ಮ ಸರ್ಕಾರ ಬರುತ್ತೆ ಮಂತ್ರಿಯಾಗ್ತಿರಾ. ಅಪ್ಪ ಬೇಡಾ ಅಂದ್ರೆ ನೀನೇ ಮಂತ್ರಿ ಆಗ್ತೀಯಾ
ಶರಣಗೌಡ : ನಾನೊಬ್ಬನೆ ಬಂದ್ರೆ ಏನಾಗುತ್ತೆ ಅನ್ನೊ ಭಯ
ಬಿಎಸ್‍ವೈ : ಒಂದು ವಿಷಯ ತಿಳ್ಕೋ ಹೇಗೂ ಎಲ್ಲ ನೀನೇ ನೋಡ್ಕೋಳೋದು ಬಾಂಬೆಗೆ ಬಾ

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *