ಕರ್ನಾಟಕ ಸುರಕ್ಷಿತವಾಗಿಡಲು ಮೋದಿ, ಬಿಜೆಪಿ ಸರ್ಕಾರದಿಂದ ಮಾತ್ರ ಸಾಧ್ಯ – ಅಮಿತ್ ಶಾ

Public TV
3 Min Read

ಮಂಗಳೂರು: ಕರ್ನಾಟಕವನ್ನು (Karnataka) ಸುರಕ್ಷಿತವಾಗಿಡಲು ಮೋದಿ ಮತ್ತು ಬಿಜೆಪಿ ಸರ್ಕಾರದಿಂದ (BJP Government) ಮಾತ್ರ ಸಾಧ್ಯ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಹೇಳಿದರು.

ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನ ವಿವೇಕಾನಂದ ಶಾಲಾ ಮೈದಾನದಲ್ಲಿ ನಡೆದ ಕ್ಯಾಂಪ್ಕೋ ಸಂಸ್ಥೆಯ ಸುವರ್ಣ ವರ್ಷಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಇದನ್ನೂ ಓದಿ: ನಾನು ಕೂಡ ʻಕಾಂತಾರʼ ಸಿನಿಮಾ ನೋಡಿದೆ: ಅಮಿತ್‌ ಶಾ

ಎಲ್ಲರೂ ನನ್ನ ಜೊತೆ `ಭಾರತ್ ಮಾತಾ ಕೀ ಜೈ’ ಎಂದು ಹೇಳಿ, ನಿಮ್ಮ ಧ್ವನಿಗೆ ಏನಾಗಿದೆ ಸ್ನೇಹಿತರೆ? ಜೋರಾದ ಧ್ವನಿಯಿಂದ ಹೇಳಿ, ಮೋದಿಜಿ ತ್ರಿಪುರಾದಲ್ಲಿದ್ದಾರೆ. ಅಲ್ಲಿ ತನಕ ನಿಮ್ಮ ಮಾತು ಕೇಳುವಂತೆ ಹೇಳಿ. ಈ ಬಾರಿ ಕರ್ನಾಟಕದಲ್ಲಿ ಬಿಜೆಪಿ ಪ್ರಚಂಡ ಬಹುಮತದಿಂದ ಆಯ್ಕೆಯಾಗಬೇಕು. ಅದಕ್ಕೆ ಸಂಕಲ್ಪ ಮಾಡಿ ಜೋರಾಗಿ ಘೋಷಣೆ ಹಾಕಿ ಎಂದು ಕರೆ ನೀಡಿದರು.  

ನಾನಿಂದು ಪುತ್ತೂರಿಗೆ (Puttur) ಬಂದಿದ್ದೇನೆ. ಇದು ಪರ್ವತ ಮತ್ತು ಸಮುದ್ರದಿಂದ ಸುತ್ತುವರಿದ ಭೂಮಿ. ಪರಶುರಾಮನ ಪುಣ್ಯಭೂಮಿ. ಇಂತಹ ವಿಭಿನ್ನ ಸಂಸ್ಕೃತಿಯ ಭೂಮಿಗೆ ನಾನು ಪ್ರಣಾಮ ಮಾಡುತ್ತೇನೆ. ಕದ್ರಿ ಮಂಜುನಾಥ ಸ್ವಾಮಿ, ಮಂಗಳಾದೇವಿ ಪುತ್ತೂರು ಮಹಾಲಿಂಗೇಶ್ವರ ದೇವರಿಗೆ ಪ್ರಣಾಮ ಮಾಡುತ್ತೇನೆ. ಅಡಿಕೆ, ಕಾಳುಮೆಣಸು ಮೊದಲಾದ ಬೆಳೆ ಬೆಳೆಯುತ್ತಾರೆ. ಅಡಿಕೆಗೂ ಗುಜರಾತಿಗೂ (Gujarat) ಅತ್ಯಂತ ನಿಕಟ ಸಂಬಂಧವಿದೆ ಎಂದು ಸ್ಮರಿಸಿದರು.

ಕ್ಯಾಂಪ್ಕೋದ ಆಮಂತ್ರಣ ಬಂದಾಗ ಹೋಗಬೇಕೋ ಬೇಡವೋ ಎಂದು ಅನಿಸಿತು. ಆದರೆ ಕ್ಯಾಂಪ್ಕೋದಂತಹ ಸಂಸ್ಥೆಯ ಸಾಧನೆ ನೋಡಿ ಬರದೇ ಇರಲು ಆಗಲಿಲ್ಲ. ವಾರಣಾಸಿ ಸುಬ್ರಾಯ ಭಟ್ ಅವರು ಸ್ಥಾಪಿಸಿದ ಸಂಸ್ಥೆ ಇದೀಗ ಬೃಹತ್ ಮರವಾಗಿ ಬೆಳೆದಿದೆ. ಕ್ಯಾಂಪ್ಕೋ 1.25 ಲಕ್ಷ ಚದರ ಮೀಟರ್‌ನ ಆಗ್ರಿ ಮಾಲ್ ಆರಂಭಿಸಲಿದೆ. ಇದರಿಂದ ಅಡಿಕೆ ಬೆಳೆಗಾರರಿಗೆ ತುಂಬಾ ಪ್ರಯೋಜನಕಾರಿಯಾಗಲಿದೆ. ಕ್ಯಾಂಪ್ಕೋ ತೆಂಗಿನ ಎಣ್ಣೆಯ ಪ್ಯಾಕ್ ಅನ್ನೂ ಬಿಡುಗಡೆ ಮಾಡಿದೆ. ಕೆಲವೊಮ್ಮೆ 50 ವರ್ಷಗಳಿಂದ ಸ್ಥಾಪನೆಯಾದ ಆಡಳಿತ ಮಂಡಳಿಯ ಮೇಲೂ ಸಂಶಯ ಮೂಡುತ್ತದೆ. ಆದರೆ ಕ್ಯಾಂಪ್ಕೋ ಇಂಥ ಯಾವುದೇ ಸಂಶಯಗಳಿಗೆ ಅವಕಾಶ ನೀಡಿಲ್ಲ ಎಂದು ಶ್ಲಾಘಿಸಿದರು.

ಇದೇ ವೇಳೆ ಕಾಂಗ್ರೆಸ್-ಜೆಡಿಎಸ್ (Congress, JDS) ವಿರುದ್ಧ ವಾಗ್ದಾಳಿ ನಡೆಸಿದ ಅಮಿತ್ ಶಾ, ಭ್ರಷ್ಟ ಕಾಂಗ್ರೆಸ್ ಸರ್ಕಾರ ದೇಶವನ್ನೇ ಹಾಳುಮಾಡಿದೆ. ಟಿಪ್ಪುವನ್ನು ನಂಬುವ ಕಾಂಗ್ರೆಸ್ ಮತ್ತು ಜೆಡಿಎಸ್‌ಗೆ ಮತ ಕೊಡಬೇಕೊ ಅಥವಾ ರಾಣಿ ಅಬ್ಬಕ್ಕನನ್ನು ನಂಬುವ ಬಿಜೆಪಿಗೆ ಮತ ಕೊಡಬೇಕೊ? ನೀವೆ ತೀರ್ಮಾನಿಸಿ ಎಂದು ಹೇಳಿದರು. ಇದನ್ನೂ ಓದಿ: ಮಲ್ಲೇಶ್ವರಂನಲ್ಲಿ ಇನ್ನೂ 10 Language Lab ಸ್ಥಾಪನೆ – ಅಶ್ವತ್ಥ ನಾರಾಯಣ ಭರವಸೆ

ಕಾಂಗ್ರೆಸ್, ಪಿಎಫ್‌ಐ (PFI)) ಸಂಘಟನೆಯ ಹಲವು ನಾಯಕರನ್ನ ಬಿಟ್ಟಿತ್ತು. ಆದರೆ ಪ್ರಧಾನಿ ಮೋದಿ ಆ ಸಂಘಟನೆಯನ್ನೇ ಬ್ಯಾನ್ ಮಾಡಿದ್ದಾರೆ. ಯಡಿಯೂರಪ್ಪನವರಿಂದಾಗಿ ರಾಜ್ಯ ಮುಂದಿದೆ. ಕರ್ನಾಟಕವನ್ನು ಸುರಕ್ಷಿತವಾಗಿಡಲು ಮೋದಿ ಮತ್ತು ಬಿಜೆಪಿ ಸರ್ಕಾರದಿಂದ ಮಾತ್ರ ಸಾಧ್ಯ ಎಂದು ಬೀಗಿದರು.

ಕಾಂಗ್ರೆಸ್ ಮತ್ತು ಜೆಡಿಎಸ್ 370ನೇ ವಿಧಿಯನ್ನು ರದ್ದು ಮಾಡಿದಾಗ ವಿರೋಧಿಸಿದ್ದರು. ಆಗ ನಾವು ರಕ್ತದ ಓಕುಳಿಯೇ ಹರಿಯಬಹುದು ಎಂದು ಎಚ್ಚರಿಸಿದ್ದೆವು. ಕಾಶ್ಮೀರ ನಮ್ಮದಾ ಅಲ್ಲವಾ ಹೇಳಿ? ಎಂದು ಸಭಿಕರನ್ನೇ ಪ್ರಶ್ನೆ ಮಾಡಿದರು.

ನಂತರ ನೀವೆಲ್ಲರೂ ಮೋದಿಜಿ, ಬಸವರಾಜ ಬೊಮ್ಮಾಯಿ ಅವರ ಜೊತೆ ನಿಲ್ಲುತ್ತೀರಾ? ಮೋದಿಜಿಯವರನ್ನು ಬೆಂಬಲಿಸುತ್ತೀರಾ? ಹಾಗಾದ್ರೆ ಎಲ್ಲರೂ ನನ್ನ ಜೊತೆ ಸೇರಿ ಒಂದೇ ಮಾತರಂ ಅಂತಾ ಹೇಳಿ? ಎರಡೂ ಕೈ ಮೇಲೆ ಮಾಡಿ ವಂದೇ ಮಾತರಂ ಹೇಳಿ ಎಂದು ಸಭಿಕರನ್ನು ಹುರಿದುಂಬಿಸಿದರು.

Live Tv
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article
Leave a Comment

Leave a Reply

Your email address will not be published. Required fields are marked *