ಕೆರೆಗೆ ಉರುಳಿ ಬಿತ್ತು ಓಮ್ನಿ- ಈಜಿ ದಡ ಸೇರಿದ ಚಾಲಕ

Public TV
1 Min Read

ಹಾವೇರಿ: ಕೆರೆಗೆ ಓಮ್ನಿ ಕಾರೊಂದು ಉರುಳಿ ಬಿದ್ದು, ಚಾಲಕ ಈಜಿ ದಡ ಸೇರಿ ಪ್ರಾಣ ಉಳಿಸಿಕೊಂಡ ಘಟನೆ ಜಿಲ್ಲೆಯ ಹಾನಗಲ್ ತಾಲೂಕಿನ ಕರೇಕ್ಯಾತನಹಳ್ಳಿ ಗ್ರಾಮದ ಬಳಿ ನಡೆದಿದೆ.

ಓಂಕಾರಯ್ಯ(40) ಈಜಿ ದಡ ಸೇರಿದ ಚಾಲಕ. ಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ಓಮ್ನಿ ಉರುಳಿ ಬಿದ್ದಿದೆ. ನಂತರ ಜೀವ ಉಳಿಸಿಕೊಳ್ಳಲು ಚಾಲಕ ಈಜಿ ದಡ ಸೇರಿದ್ದಾನೆ. ಕೆರೆಗೆ ತಡೆ ಗೋಡೆ ಇಲ್ಲದ್ದರಿಂದ ಓಮ್ನಿ ಕೆರೆಗೆ ಉರುಳಿದೆ.

ಮಂಗಳವಾರ ರಾತ್ರಿ ಕೆರೆಯ ಪಕ್ಕದಲ್ಲಿದ್ದ ರಸ್ತೆಯಲ್ಲಿ ಓಂಕಾರಯ್ಯ ಓಮ್ನಿ ಚಲಾಯಿಸಿಕೊಂಡು ಬರುತ್ತಿದ್ದರು. ಆಗ ಎದುರಿನಿಂದ ಬಂದ ಲಾರಿಗೆ ದಾರಿ ನೀಡಲು ಹೋಗಿ ನಿಯಂತ್ರಣ ತಪ್ಪಿ ಕೆರೆಗೆ ವಾಹನ ಪಲ್ಟಿಯಾಗಿದೆ. ಓಮ್ನಿಯಲ್ಲಿ ಪ್ರಯಾಣಿಕರು ಇಲ್ಲದ್ದರಿಂದ ಭಾರಿ ದುರಂತ ತಪ್ಪಿದೆ.

ಕೆರೆಯ ದಂಡೆಯ ಮೇಲೆ ನಿತ್ಯವೂ ನೂರಾರು ವಾಹನಗಳು ಓಡಾಡುತ್ತವೆ. ಆದರೂ ಕೂಡ ಕೆರೆಗೆ ತಡೆಗೋಡೆ ನಿರ್ಮಿಸಿಲ್ಲವೆಂದು ಅಧಿಕಾರಿಗಳು ಮತ್ತು ಸರ್ಕಾರದ ವಿರುದ್ಧ ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ.

ಘಟನೆ ಕುರಿತು ಆಡೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *