ಲಸಿಕೆ ಪಡೆಯಲು ಹೇಳಿದ್ದಕ್ಕೆ ಪೊಲೀಸರಿಗೆ ಬೆದರಿಕೆ ಹಾಕಿದ ವೃದ್ಧೆ

Public TV
1 Min Read

ಯಾದಗಿರಿ: ಕೋವಿಡ್ ಲಸಿಕಾ ಹೈಡ್ರಾಮ ಯಾದಗಿರಿಯಲ್ಲಿ ಮುಂದುವರೆದಿದ್ದು, ಲಸಿಕೆ ಪಡೆಯುವಂತೆ ಬುದ್ಧಿ ಮಾತು ಹೇಳಿದ್ದಕ್ಕೆ ವೃದ್ಧೆಯೊಬ್ಬರು ಪೊಲೀಸರು ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಬೆದರಿಕೆ ಹಾಕಿದ್ದಾರೆ.

ಯಾದಗಿರಿ ಜನರಲ್ಲಿ ಕೋವಿಡ್ ವ್ಯಾಕ್ಸಿನ್ ಬಗ್ಗೆ ಮೌಢ್ಯತೆ ಮತ್ತೆ ಮುಂದುವರಿದಿದ್ದು, ಜನರ ಮನವೊಲಿಸಲು ಅಧಿಕಾರಿಗಳು ಹರ ಸಹಾಸ ಪಡುವಂತಾಗಿದೆ. ಯಾದಗಿರಿ ತಾಲೂಕಿನ ಅಲ್ಲಿಪುರನಲ್ಲಿ ಈ ಘಟನೆ ನಡೆದಿದೆ. ಈ ಗ್ರಾಮದಲ್ಲಿ ಕೋವಿಡ್ ಲಸಿಕೆ ಪಡೆಯಲು ಜನ ಉದ್ಧಟತನ ತೋರುತ್ತಿದ್ದು, ಗ್ರಾಮಸ್ಥರಿಗೆ ಲಸಿಕೆ ನೀಡಲು ಅಧಿಕಾರಿಗಳು ಹೈರಾಣಾಗಿದ್ದಾರೆ. ಇದನ್ನೂ ಓದಿ: ಎರಡು ರಾಷ್ಟ್ರೀಯ ಪಕ್ಷಗಳು ಪ್ರಾದೇಶಿಕ ಪಕ್ಷಗಳನ್ನು ಮುಗಿಸಲು ಯತ್ನಿಸುತ್ತಿವೆ: ದೇವೇಗೌಡ

ತಾಲೂಕಿನ ಶೆಟ್ಟಿಗೇರಾದಲ್ಲಿಯೂ ಸಹ ಇಂತಹದ್ದೆ ಪ್ರಕರಣ ನಡೆದಿದೆ. ನಾನು ಸತ್ತರೂ ಕೋವಿಡ್ ಲಸಿಕೆ ಪಡೆಯುವುದಿಲ್ಲ. ನೀವೇನು ಮಾಡಕೊಳ್ಳತ್ತಿರಾ ಮಾಡಿಕೊಳ್ಳಿ. ಯಾರನ್ನಾದರೂ ಕರೆಸಿ ನಾನು ಯಾರ ಮಾತು ಕೇಳಲ್ಲ ಎಂದು ವೃದ್ಧೆ ಪೊಲೀಸರಿಗೆ ಮತ್ತು ಆರೋಗ್ಯ ಅಧಿಕಾರಿಗಳಿಗೆ ಅವಾಜ್ ಹಾಕಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *