ಟೌನ್‍ಹಾಲ್ ಮುಂದೆ ಪಲ್ಟಿಯಾದ ಲಾರಿ- ಚಾಲಕನ ಅಜಾಗರೂಕತೆಗೆ ಪತ್ರಕರ್ತ ದುರ್ಮರಣ

Public TV
1 Min Read

ಬೆಂಗಳೂರು: ಸಿಲಿಕಾನ್ ಸಿಟಿಯ ಹೃದಯ ಭಾಗದಲ್ಲಿ ಪಲ್ಟಿ ಆದ ಕ್ಯಾಂಟರ್ ಪತ್ರಕರ್ತನನ್ನು ಬಲಿ ಪಡೆದುಕೊಂಡಿದೆ.

ಟೌನ್ ಹಾಲ್ ಮುಂಭಾಗ ದೊಡ್ಡ ಲಾಜಿಸ್ಟಿಕ್ ಲಾರಿ ಡಿವೈಡರ್ಗೆ ಡಿಕ್ಕಿ ಹೊಡೆದು ಪಕ್ಕದ ರಸ್ತೆ ಮೇಲೆ ಪಲ್ಟಿ ಆಗಿದೆ. ಘಟನೆಯಲ್ಲಿ ಓರ್ವ ಪತ್ರಕರ್ತ ಗಂಗಾಧರ್ ಮೂರ್ತಿ ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣವೇ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ವಿಕ್ಟೋರಿಯಾ ಶವಾಗಾರಕ್ಕೆ ದೇಹ ಶಿಫ್ಟ್ ಮಾಡಲಾಗಿದೆ.

ಭಾನುವಾರ ರಸ್ತೆ ಖಾಲಿ ಇದ್ದ ಕಾರಣ, ಕ್ಯಾಂಟರ್ ಚಾಲಕ ವೇಗವಾಗಿ ಜೆ.ಸಿ. ರಸ್ತೆಯಿಂದ ಬಂದಿದ್ದಾನೆ. ವೇಗವಾಗಿ ಬಂದು ಸಡನ್ ಆಗಿ ಮಾರ್ಕೆಟ್ ಕಡೆ ತಿರವು ಪಡೆದುಕೊಳ್ಳಲು ಪ್ರಯತ್ನಿಸಿದ್ದಾನೆ. ಈ ವೇಳೆ, ಲಾರಿಯಲ್ಲಿದ್ದ ಸುಮಾರು 300 ಲೀಟರ್ ಅಷ್ಟು ಆಯಿಲ್ ಡ್ರಮ್‍ಗಳ ತೂಕ ಒಂದೇ ಕಡೆ ವಾಲಿದೆ. ಇದರಿಂದ ಕಂಟ್ರೋಲ್‍ಗೆ ಸಿಗದೇ ಲಾರಿ ಡಿವೈಡರ್ಗೆ ಡಿಕ್ಕಿಯಾಗಿ ಪಲ್ಟಿಯಾಗಿದೆ. ಇದನ್ನೂ ಓದಿ: ಹಿರಿಯ ಪತ್ರಕರ್ತ ಜಿ.ಎಂ.ಕುಲಕರ್ಣಿ ನಿಧನ

ಲಾರಿ ಬಿಟ್ಟು ಡ್ರೈವರ್ ಎಸ್ಕೇಪ್..!
ಮಹಾರಾಷ್ಟ್ರದ ನೋಂದಣಿ ಸಂಖ್ಯೆ ಹೊಂದಿರೋ ಲಾರಿ ಪಲ್ಟಿಯಾಗುತ್ತಿದ್ದಂತೆ ಚಾಲಕ ಪರಾರಿಯಾಗಿದ್ದಾನೆ. ಘಟನೆ ಸಂಬಂಧ ಹಲಸೂರು ಗೇಟ್ ಸಂಚಾರಿ ಪೊಲೀಸ್ ಠಾಣೆಯಲ್ಲಿ ಅತಿಯಾದ ವೇಗ, ಅಜಾಗರೂಕತೆ ವಾಹನ ಚಾಲನೆ ಆರೋಪದಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ನಾಪತ್ತೆ ಆಗಿರೋ ಚಾಲಕನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಪಲ್ಟಿಯಾಗಿದ ಸ್ಥಳದಲ್ಲಿ ಕ್ಯಾಂಟರ್ ನಲ್ಲಿದ್ದ ಆಯಿಲ್ ರಸ್ತೆಗೆ ಚೆಲ್ಲಿತ್ತು. ಕೂಡಲೇ ಪೊಲೀಸರು ಸ್ಥಳೀಯರ ಸಹಾಯದಿಂದ ಆಯಿಲ್ ಡಬ್ಬಗಳನ್ನ ಬೇರ್ಪಡಿಸಿ ರಸ್ತೆಗೆ ಅಡ್ಡಲಾಗಿ ಬಿದ್ದಿದ್ದ ಲಾರಿಯನ್ನ ಶಿಫ್ಟ್ ಮಾಡಲಾಯ್ತು.

Share This Article
Leave a Comment

Leave a Reply

Your email address will not be published. Required fields are marked *