ಹಣ ಪಡೆದು ಟಿಕೆಟ್ ಬಿಟ್ಟ ಆರೋಪ- ಬಳ್ಳಾರಿಯಲ್ಲಿ ಆರಂಭವಾಗಿದೆ ಆಣೆ ಪ್ರಮಾಣ ಪಾಲಿಟಿಕ್ಸ್!

Public TV
1 Min Read

ಬಳ್ಳಾರಿ: ಇಲ್ಲಿನ ಸಿರಗುಪ್ಪ ಕ್ಷೇತ್ರದಲ್ಲೀಗ ಆಣೆ ಪ್ರಮಾಣ ರಾಜಕೀಯ ಆರಂಭವಾಗಿದೆ. ಶಾಸಕ ಬಿಎಂ ನಾಗರಾಜ್ ಹಣ ಪಡೆದು ಟಿಕೆಟ್ ಬಿಟ್ಟು ಕೊಟ್ಟಿದ್ದಾರೆ ಅನ್ನೋ ಆರೋಪ ಇದೀಗ ಆಣೆ ಪ್ರಮಾಣ ಮಾಡೋ ಲೇವಲ್‍ಗೆ ಹೋಗಿದೆ.

ಸಿಂದನೂರಿನ ದಡೆಸೂಗೂರು ದರ್ಗಾದಲ್ಲಿ ಶಾಸಕ ನಾಗರಾಜ್ ಮತ್ತು ನಾಗೇಂದ್ರ ಆಣೆ ಪ್ರಮಾಣ ಮಾಡಿದ್ರು. ತಾವು ಹಣ ಪಡೆದಿಲ್ಲ ಅಂತಾ ನಾಗರಾಜ್ ದೇವರ ಮುಂದೆ ಆಣೆ ಮಾಡಿದ್ರೆ, ನಾಗೇಂದ್ರ ತಾವು ಹಣ ಕೊಟ್ಟಿಲ್ಲ ಅಂತ ಪ್ರಮಾಣ ಮಾಡಿದ್ರು.

ನಾಗೇಂದ್ರ ಸೋದರಳಿಯನಿಗೆ ಟಿಕೆಟ್ ಘೋಷಣೆ ಆದ್ಮೇಲೆ, ಎಂಎಲ್‍ಎ ಬಿಎಂ ನಾಗರಾಜ್ ಟಿಕೆಟ್‍ಗೆ ಪ್ರಯತ್ನಿಸಿದ್ರು. ನಾಗರಾಜ್ ಬೆಂಬಲಿಗರು ಸಿಎಂ ಕಾರ್‍ಗೆ ಮುತ್ತಿಗೆ ಹಾಕಿ ಬೈಯಿಸಿಕೊಂಡಿದ್ರು. ಅವನೇ ಟಿಕೆಟ್ ಬೇಡ ಅಂದಿದ್ದಾನೆ.  ಹೀಗಾಗಿ ಬಿಎಂ ನಾಗರಾಜ್ ಹಣ ಪಡೆದು ಟಿಕೆಟ್ ಬಿಟ್ಟುಕೊಟ್ಟಿದ್ದಾರೆ ಅನ್ನೋ ವದಂತಿ ಹರಡಿತ್ತು.

Share This Article
Leave a Comment

Leave a Reply

Your email address will not be published. Required fields are marked *