ಈಗಲೂ ಬೇಕಾದ್ರೆ ಅವಳನ್ನೇ ಮದುವೆ ಆಗ್ತೀನಿ: ಆ್ಯಸಿಡ್ ನಾಗನ ದುರಹಂಕಾರದ ಮಾತು

Public TV
1 Min Read

ಬೆಂಗಳೂರು: ಈಗಲೂ ಕೊಟ್ಟರೆ ಅವಳನ್ನೇ ಮದುವೆ ಆಗುತ್ತೇನೆ ಎಂದು ಆ್ಯಸಿಡ್ ನಾಗೇಶ್ ಹೇಳಿದ್ದಾರೆ.

ಶುಕ್ರವಾರ ಆ್ಯಸಿಡ್ ನಾಗೇಶನನ್ನು ಬಂಧಿಸಿ ಬೆಂಗಳೂರಿಗೆ ಕರೆ ತರುವ ಸಂದರ್ಭದಲ್ಲಿ ಯಾಕೋ ಆ್ಯಸಿಡ್ ಹಾಕಿದೆ ಎಂದು ಪೊಲೀಸರು ಪ್ರಶ್ನಿಸಿದ್ದಾರೆ. ನಾನು ಆ್ಯಸಿಡ್ ಹಾಕಬೇಕು ಅಂತ ಅಂದುಕೊಂಡಿರಲಿಲ್ಲ. ಆದರೆ ಅವರ ಮನೆಯವರೇ ಆ್ಯಸಿಡ್ ಹಾಕುತ್ತಾನಂತೆ ಅಂತ ಊರು ತುಂಬಾ ಹೇಳಿಕೊಂಡು ಬಂದರು. ಆ್ಯಸಿಡ್ ಹಾಕುವ ಹಿಂದಿನ ದಿನ ಕೂಡ ಆಕೆಯನ್ನು ಭೇಟಿಯಾಗಿದ್ದೆ. ಆದರೆ ನಾನು ಆ್ಯಸಿಡ್ ಹಾಕಬೇಕು ಅಂದುಕೊಂಡಿರಲಿಲ್ಲ. ಯಾವಾಗ ಅವರ ಮನೆಯವರು ಎಲ್ಲಾ ಕಡೆ ಹೇಳಿಕೊಂಡು ಬಂದರೋ ಆಗ ಆ್ಯಸಿಡ್ ಹಾಕಿದೆ. ಈಗಲೂ ಅವಳನ್ನು ಕೊಡುತ್ತಾರಾ ಕೇಳಿ ನೋಡಿ ಸರ್. ಅವಳನ್ನೇ ಮದುವೆಯಾಗುತ್ತೇನೆ ಎಂದು ಪೊಲೀಸರ ಮುಂದೆಯೇ ದುರಹಂಕಾರದ ಮಾತುಗಳನ್ನು ಆಡಿದ್ದಾನೆ. ಇದನ್ನೂ ಓದಿ: ನಾನು ಆ್ಯಸಿಡ್ ಹಾಕೋಕೆ ಯುವತಿನೇ ಕಾರಣ – ಕಿರಾತಕ ನಾಗೇಶ್ ಆರೋಪ

ಘಟನೆ ಬಳಿಕ ಹೊಸಕೋಟೆ ಬಳಿಯ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂದು ನಿರ್ಧರಿಸಿ ಆಟೋ ಹತ್ತಿ ಹೋಗಿದ್ದೆ. ಆದರೆ ಕೊನೆ ಕ್ಷಣದಲ್ಲಿ ನಿರ್ಧಾರ ಬದಲಿಸಿರುವುದಾಗಿ ತಿಳಿಸಿದ್ದಾನೆ. ಅಲ್ಲದೇ ಆ್ಯಸಿಡ್ ಎರಚುವ ವೇಳೆ ನಾಗೇಶನ ಕೈಗೂ ಗಾಯಗಳಾಗಿದ್ದು, ತನ್ನ ಕೈ ನೋಡಿದಾಗಲೆಲ್ಲ ಅವಳು ಅಳುವುದೇ ನೆನಪಾಗುತ್ತದೆ ಎಂದು ವಿಕೃತ ಮನಸ್ಸಿನ ಭಾವನೆಯನ್ನು ಹೊರಹಾಕಿದ್ದಾನೆ. ಇದನ್ನೂ ಓದಿ: ನನ್ನ ಕಣ್ಣ ಮುಂದೆಯೇ ಅವನಿಗೆ ಶಿಕ್ಷೆ ಆಗಬೇಕು – ಸಂತ್ರಸ್ತ ಯುವತಿ ಕಣ್ಣೀರು

Share This Article
Leave a Comment

Leave a Reply

Your email address will not be published. Required fields are marked *