ಮೆಟ್ಟಿಲಲ್ಲೇ ಕುಳಿತು ಮಗುವಿಗೆ ಹಾಲು, ಬಾತ್ ರೂಂ ಪಕ್ಕನೇ ಊಟ- ಚಾಮರಾಜನಗರದ ಜಿಲ್ಲಾಸ್ಪತ್ರೆಯಲ್ಲಿ ಅವ್ಯವಸ್ಥೆ!

Public TV
1 Min Read

ಚಾಮರಾಜನಗರ: ರಾಜ್ಯಕ್ಕೆ ಇಬ್ಬರು ಸಚಿವರನ್ನು ನೀಡಿರುವ ಗಡಿ ಚಾಮರಾಜನಗರದ ಜಿಲ್ಲಾಸ್ಪತ್ರೆಯಲ್ಲಿ ರೋಗಿಗಳ ಸ್ಥಿತಿ ಚಿಂತಜನಕವಾಗಿದೆ.

ರೋಗಿಗಳಿಗೆ ಮಲಗಲು ಬೆಡ್ ಮತ್ತು ಕುಳಿತುಕೊಳ್ಳಲು ಚೇರೂ ಇಲ್ಲದೆ ನೆಲದ ಮೇಲೆ ಮಲಗುವ ಮತ್ತು ಕೂರುವ ಸ್ಥಿತಿ ನಿರ್ಮಾಣವಾಗಿದೆ. ಜೊತೆಗೆ ರೋಗಿಗಳಿಗೆ ಸರಿಯಾಗಿ ಚಿಕಿತ್ಸೆಯನ್ನೂ ನೀಡುತ್ತಿಲ್ಲ.

ಇದಲ್ಲದೇ ಬಾಣಂತಿಯರು ತಮ್ಮ ಮಗುವಿಗೆ ಹಾಲುಣಿಸಲು ಸ್ಥಳವಿಲ್ಲದೇ ಮೆಟ್ಟಿಲುಗಳ ಮೇಲೆ ಕುಳಿತು ಹಾಲುಣಿಸುವಂತಾಗಿದೆ. ಊಟ ಮಾಡಲು ಜಾಗವಿಲ್ಲದ ಕಾರಣ ರೋಗಿಗಳು ಬಾತ್ ರೂಂ ಪಕ್ಕ, ಓಡಾಡುವ ಜಾಗದಲ್ಲಿ ಕುಳಿತು ಊಟ ಮಾಡ್ಬೇಕಾಗಿದೆ. ಈ ಬಗ್ಗೆ ಸಚಿವರುಗಳಾದ ಪುಟ್ಟರಂಗಶೆಟ್ಟಿ ಹಾಗೂ ಎನ್.ಮಹೇಶ್‍ಗೆ ದೂರು ನೀಡಿ ಒಂದು ವಾರ ಕಳೆದ್ರೂ ಆಸ್ಪತ್ರೆಯತ್ತ ಯಾರೋಬ್ಬರು ಮುಖ ಮಾಡಿಲ್ಲ. ಇದು ಸಾರ್ವಜನಿಕರು ಆಕ್ರೋಶಕ್ಕೆ ಕಾರಣವಾಗಿದೆ.

Share This Article
Leave a Comment

Leave a Reply

Your email address will not be published. Required fields are marked *