ಎಚ್‍ಡಿಡಿ ಪಾದಪೂಜೆ ಮಾಡಿದ್ದ ವಿನಯ್ ಗುರೂಜಿ 6 ತಿಂಗ್ಳು ಭಕ್ತರಿಗೆ ದರ್ಶನ ನೀಡಲ್ಲ!

Public TV
1 Min Read

ಚಿಕ್ಕಮಗಳೂರು: ನಡೆದಾಡುವ ದೇವರೆಂದೇ ಎಂದೇ ಖ್ಯಾತಿಯಾಗಿರೋ ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಗೌರಿಗದ್ದೆಯ ಸ್ವರ್ಣ ಪೀಠಿಕೇಶ್ವರಿ ದತ್ತಾಶ್ರಮದ ಅವಧೂತ ವಿನಯ್ ಗುರೂಜಿ ಇನ್ನು ಆರು ತಿಂಗಳು ಭಕ್ತರಿಗೆ ದರ್ಶನ ನೀಡುವುದಿಲ್ಲ.

ಕಳೆದ ಎಂಟು ವರ್ಷದಿಂದ ಪ್ರತಿ ಗುರುವಾರ ಭಕ್ತರಿಗೆ ದರ್ಶನ ನೀಡ್ತಿದ್ದ ಗುರೂಜಿ ಇದೀಗ, ಮೌನ ವ್ರತಕ್ಕೆ ಮುಂದಾಗಿದ್ದಾರೆ. ಆರು ತಿಂಗಳು ಗೌಪ್ಯ ಸ್ಥಳದಲ್ಲಿ ಮೌನ ವ್ರತ ನಡೆಸಲಿದ್ದು, ಎಲ್ಲಿರುತ್ತಾರೆಂಬ ಮಾಹಿತಿ ಆಶ್ರಮದ ಸಿಬ್ಬಂದಿಗೂ ತಿಳಿದಿಲ್ಲ. ಇದನ್ನೂ ಓದಿ: ಎಚ್‍ಡಿಕೆ ಸಿಎಂ ಆಗ್ತಾರೆ ಅಂತ 2 ವರ್ಷದ ಹಿಂದೆಯೇ ಭವಿಷ್ಯ – ಗುರೂಜಿಗೆ ದೇವೇಗೌಡ್ರು, ಸ್ಪೀಕರ್ ಪಾದಪೂಜೆ

ಇತ್ತೀಚೆಗೆ ರಾಜಕಾರಣಿಗಳ ಭೇಟಿಯಿಂದ ಗುರೂಜಿ ಸಾಕಷ್ಟು ಸುದ್ದಿಯಾಗಿದ್ದರು. ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಗುರೂಜಿಯ ಪಾದಪೂಜೆ ನಡೆಸಿದ್ರೆ, ಸ್ಪೀಕರ್ ರಮೇಶ್ ಕುಮಾರ್ ಗುರೂಜಿಗೆ ಆರತಿ ಬೆಳಗಿದ್ರು. ಇದೆಲ್ಲಾ ಮಾಧ್ಯಮದಲ್ಲಿ ಸುದ್ದಿಯಾದ ಮೇಲೆ ಬರುವ ಭಕ್ತರ ಸಂಖ್ಯೆ ಕೂಡ ಡಬಲ್ ಆಗಿತ್ತು.

ಪ್ರಚಾರ ಬೇಡವೆಂದರೂ ಸಾಕಷ್ಟು ಪ್ರಚಾರ ಸಿಕ್ಕಿದ್ರಿಂದ ಮೌನ ವ್ರತಕ್ಕೆ ಮುಂದಾಗಿದ್ದಾರೆ. ಹೀಗಾಗಿ ಸದ್ಯ ಗುರೂಜಿಯನ್ನ ಕಾಣಲು ಬರುತ್ತಿರುವ ಭಕ್ತರು ಬೇಸರದಿಂದ ವಾಪಸ್ ಹೋಗ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *