ಪ್ರವಾಹ ಸಂತ್ರಸ್ತ ವಿದ್ಯಾರ್ಥಿಗಳಿಗೆ ಮತ್ತೊಮ್ಮೆ ಕೌನ್ಸಿಲಿಂಗ್‍ಗೆ ಅವಕಾಶ ಸಾಧ್ಯವಿಲ್ಲ- ಡಿಕೆಶಿ

Public TV
2 Min Read

ಬೆಂಗಳೂರು: ಮಡಿಕೇರಿಯ ಪ್ರವಾಹ ಸಂತ್ರಸ್ತ ವಿದ್ಯಾರ್ಥಿಗಳಿಗೆ ಮತ್ತೊಮ್ಮೆ ವೈದ್ಯಕೀಯ ಸೀಟ್ ಕೌನ್ಸಿಲಿಂಗ್‍ಗೆ ಅವಕಾಶ ಸಾಧ್ಯವಿಲ್ಲ. ಈ ಕುರಿತು ಸರ್ಕಾರ ಮಧ್ಯ ಪ್ರವೇಶ ಮಾಡುವುದಿಲ್ಲ. ಇದು ಅವರ ವೈಯಕ್ತಿಕ ಸಮಸ್ಯೆ ಅಂತ ವೈದ್ಯಕೀಯ ಶಿಕ್ಷಣ ಸಚಿವ ಡಿಕೆ ಶಿವಕುಮಾರ್ ಹೇಳಿದ್ದಾರೆ.

ಈ ಕುರಿತು ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವರು, ಕೌನ್ಸಿಲಿಂಗ್ ಭಾಗಿಯಾಗಲು ಅವಕಾಶ ಕೋರಿ ಯಾವುದೇ ದೂರು ಕೂಡ ಬಂದಿಲ್ಲ. ಆ ರೀತಿ ದೂರು ಬಂದ್ರು ಸರ್ಕಾರ ಏನು ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿದರು.

ಇಂದು ಕೊನೆ ದಿನದ ಮೆಡಿಕಲ್ ಕೌನ್ಸಿಲಿಂಗ್ ನಡೆಯುತ್ತಿದೆ. ನಾನು ಇಂಟರ್ ಫಿಯರ್ ಆಗಬಾರದು ಅಂತಾ ಕೊನೆ ದಿನ ಬಂದಿದ್ದೇನೆ. ಕೆಇಎ ಸರಿಯಾಗಿ ಪಾರದರ್ಶಕವಾಗಿ ಒಟ್ಟು 49 ಕಾಲೇಜುಗಳ 6,260 ಸೀಟ್ ಗೆ ಕೌನ್ಸಿಲಿಂಗ್ ಪ್ರಕ್ರಿಯೆ ನಡೆದಿದೆ. ಬಾಕಿ ಉಳಿದ 750 ಸೀಟ್ ಗೆ ಇಂದು ಕೊನೆ ಹಂತದ ಕೌನ್ಸಿಲಿಂಗ್ ನಡೆಸಲಾಗುತ್ತಿದೆ. ಮಹಾರಾಷ್ಟ್ರ ತಮಿಳುನಾಡು ಕೇರಳ ರಾಜ್ಯಗಳು ನಮ್ಮನ್ನ ನೋಡಿ ಕೌನ್ಸಿಲಿಂಗ್ ಪ್ರಕ್ರಿಯೆ ನಡೆಸುತ್ತಿದೆ. ಕಾನೂನಿನ ಅಡಿಯಲ್ಲಿ ಒಂದು ಸೀಟ್ ಸಹ ದೋಖಾ ಆಗಿಲ್ಲ. ಇನ್ನು 15 ಸೆಪ್ಟೆಂಬರ್ ಒಳಗೆ ರಿಂದ ಉಳಿದ ಡೆಂಟಲ್ ಸೀಟ್ ಕೌನ್ಸಿಲಿಂಗ್ ಮುಗಿಸಲಾಗುತ್ತೆ ಅಂತ ಅವರು ಹೇಳಿದ್ರು.

ಇದಕ್ಕೂ ಮೊದಲು ಕೌನ್ಸಿಲಿಂಗ್ ನಲ್ಲಿ ಗೋಲ್ ಮಾಲ್ ನಡೆಯುತ್ತಿರುವ ಅರೋಪ ಹಿನ್ನೆಲೆಯಲ್ಲಿ ಸಚಿವ ಡಿಕೆ ಶಿವಕುಮಾರ್ ಅವರು ಮಲ್ಲೇಶ್ವರಂನಲ್ಲಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ದಿಢೀರ್ ಭೇಟಿ ನೀಡಿದ್ದಾರೆ. ಅಲ್ಲದೇ ಇದೇ ವೇಳೆ ಕೌನ್ಸಿಲಿಂಗ್ ಬಂದ ವಿದ್ಯಾರ್ಥಿಗಳ, ಪೋಷಕರ ಜತೆ ಸಚಿವರ ಚರ್ಚೆ ನಡೆಸಿದ್ದು, ಕೌನ್ಸಿಲಿಂಗ್ ಬಗ್ಗೆ ಅಧಿಕಾರಿಗಳ ಬಳಿ ಮಾಹಿತಿ ಪಡೆದಿದ್ದಾರೆ

16 ಸಾವಿರ ಶುಲ್ಕವನ್ನ ಏಕಾಏಕಿ 50 ಸಾವಿರಕ್ಕೆ ಏರಿಕೆ ಮಾಡಿದ ಕುರಿತ ಮಾಧ್ಯಮಗಳ ಪ್ರಶ್ನೆಗೆ, ಒಂದು ಮೆಡಿಕಲ್ ವಿದ್ಯಾರ್ಥಿಯನ್ನ ಓದಿಸಲು 10 ಲಕ್ಷ ರೂ. ಖರ್ಚಾಗುತ್ತೆ. ಯುಕೆಜಿ ಎಲ್ ಕೆಜಿ ಮಕ್ಕಳನ್ನ 50 ಸಾವಿರ ಕೊಟ್ಟು ಶಾಲೆಗೆ ಕಳುಹಿಸುತ್ತಾರೆ. ಮೆಡಿಕಲ್ ಗೆ ಸೇರುವವರಿಗೆ ಏನು ಕಷ್ಟನಾ ಅಂತ ಮರು ಪ್ರಶ್ನೆ ಹಾಕಿದ್ದಾರೆ. ಸಚಿವರಿಗೆ ವೈದ್ಯಕೀಯ ಶಿಕ್ಷಣ ಇಲಾಖೆಯ ಕಾರ್ಯದರ್ಶಿ ಮಂಜುಳಾ ಸಾಥ್ ನೀಡಿದ್ರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *