ನಿರ್ಭಯಾ ದೋಷಿಗಳನ್ನ ಕೈಯಾರ ಗಲ್ಲಿಗೇರಿಸಿದ್ದು ಖುಷಿ ತಂದಿದೆ: ಪವನ್ ಜಲ್ಲಾದ್

Public TV
2 Min Read

– ಅಪರಾಧಿಗಳನ್ನು ಗಲ್ಲಿಗೇರಿಸಿದ್ದನ್ನು ವಿವರಿಸಿದ ಪವನ್
– ನನ್ನ ಮಕ್ಕಳು ಗಲ್ಲಿಗೇರಿಸುವ ವೃತ್ತಿಗೆ ಬರುವುದು ನನಗಿಷ್ಟವಿಲ್ಲ

ಲಕ್ನೋ: ನಾನು ನನ್ನ ಧರ್ಮವನ್ನು ಪಾಲಿಸಿದ್ದೇನೆ. ಇದು ನಮ್ಮ ಪೂರ್ವಜರ ಕೆಲಸ. ಅಪರಾಧಿಗಳನ್ನು ನೇಣಿಗೆ ಹಾಕುವ ಮುನ್ನ ಪಶ್ಚಾತ್ತಾಪ ಪಡಬೇಕಿತ್ತು. ಆದರೆ ಹಾಗೆ ಮಾಡಲಿಲ್ಲ ಎಂದು ನಿರ್ಭಯಾ ಪ್ರಕರಣದ ಅಪರಾಧಿಗಳನ್ನು ಗಲ್ಲಿಗೇರಿಸಿದ ಪವನ್ ಜಲ್ಲಾದ್ ಹೇಳಿದ್ದಾರೆ.

ಮಾಧ್ಯಮ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ನಿರ್ಭಯಾ ಪ್ರಕರಣದ ನಾಲ್ವರು ಆರೋಪಿಗಳನ್ನು ಶುಕ್ರವಾರ ಬೆಳಗ್ಗೆ 5:30ಕ್ಕೆ ಗಲ್ಲಿಗೇರಿಸಲಾಯಿತು. ನೇಣು ಹಾಕುವ ಮನೆಯಲ್ಲಿ ಮಾತನಾಡಲು ಯಾರಿಗೂ ಅವಕಾಶವಿಲ್ಲ. ಆದ್ದರಿಂದ ಕೆಲಸವು ಸನ್ನೆಗಳ ಮೂಲಕ ಮಾತ್ರ ನಡೆಯಿತು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: “ನಾಲ್ವರಲ್ಲಿ ಕೊನೆಯಾಸೆ ಹೇಳಿದ್ದು ವಿನಯ್ ಮಾತ್ರ”

ನಾನು ಮಾರ್ಚ್ 17ರಂದು ತಿಹಾರ್ ಜೈಲಿಗೆ ಹೋಗಿದ್ದೆ. ಬಳಿಕ ಅಪರಾಧಿಗಳನ್ನು ಗಲ್ಲಿಗೇರಿಸಲು ಸಿದ್ಧತೆ ನಡೆಸಲಾಯಿತು. ಗುರುವಾರ ಬೆಳಗ್ಗೆ ನಾಲ್ಕು ಗಂಟೆ ಸುಮಾರಿಗೆ ನೇಣುಗಳನ್ನು ಸರಿಪಡಿಸಲಾಗಿತ್ತು. ಬಳಿಕ ಅಪರಾಧಿಗಳನ್ನು ಅಲ್ಲಿಗೆ ತಂದು ನಿಲ್ಲಿಸಲಾಗಿತ್ತು. ಮೊದಲು ಅಕ್ಷಯ್ ಮತ್ತು ಮುಖೇಶ್, ನಂತರ ಪವನ್ ಹಾಗೂ ವಿನಯ್‍ನನ್ನು ಹಲಗೆಯ ಮೇಲೆ ಕರೆದೊಯ್ಯಲಾಗಿತ್ತು. ಬಳಿಕ ಅಧಿಕಾರಿಗಳು ಸನ್ನೆಯ ಮೂಲಕ ಆಜ್ಞೆ ನೀಡಿದಾಗ ನೇಣು ಹಾಕಲಾಯಿತು ಎಂದು ಪವನ್ ಜಲ್ಲಾದ್ ವಿವರಿಸಿದ್ದಾರೆ.

ನನ್ನ ಮಟ್ಟಿಗೆ, ಅಪರಾಧಿಗಳನ್ನು ನೇಣಿಗೆ ಹಾಕುವುದು ಸಮಾಜದಿಂದ ಕೆಟ್ಟ ಜನರನ್ನು ತೆಗೆದುಹಾಕುವ ದೊಡ್ಡ ವೃತ್ತಿಯಾಗಿದೆ. ನಾನು ಕೂಡ ಓರ್ವ ಮಗಳ ತಂದೆ. ಆದ್ದರಿಂದ ಯುವತಿಯ ಮೇಲೆ ಅತ್ಯಾಚಾರಿ ಎಸಗಿ, ಕೊಲೆಗೈದವರನ್ನು ಗಲ್ಲಿಗೇರಿಸಿದ್ದು ನನಗೆ ತುಂಬಾ ಸಂತೋಷವಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ನಿರ್ಭಯಾ ಪ್ರಕರಣದ ಅಪರಾಧಿಗಳು ಸಿಕ್ಕಿಬಿದ್ದಿದ್ದು ಹೇಗೆ?

ಗಲ್ಲು ಶಿಕ್ಷೆ ಅಪರಾಧಿಗಳಿಗೆ ನೇಣು ಹಾಕುವ ಕೆಲಸವನ್ನು ಮಾಡುತ್ತಿರುವ ಪವನ್ ಜಲ್ಲಾದ್ ಅವರ ಕುಟುಂಬದಲ್ಲಿ ಮೂರನೇ ವ್ಯಕ್ತಿ. ಈ ಕುರಿತು ಮಾತನಾಡಿದ ಅವರು, ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರನ್ನು ಹತ್ಯೆಗೈದಿದ್ದವರಿಗೆ ನಮ್ಮ ಅಜ್ಜ ನೇಣು ಹಾಕಿದ್ದರು. ಅವರು ಕೊನೆಯದಾಗಿ ಅಪರಾಧಿಯೊಬ್ಬನನ್ನು 1989ರ ಜನವರಿಯಲ್ಲಿ ಗಲ್ಲಿಗೇರಿಸಿದ್ದರು. ಬಳಿಕ ನಮ್ಮ ತಂದೆ ಮಮ್ಮು ಜುಲ್ಲಾದ್ ಸಂಸತ್ತಿನ ಮೇಲೆ ನಡೆದ ಭಯೋತ್ಪಾದಕ ದಾಳಿಯ ಮಾಸ್ಟರ್ ಮೈಂಡ್ ಅಫ್ಜಲ್‍ಗೆ ನೇಣುಹಾಕಲು ಉತ್ಸುಕರಾಗಿದ್ದರು. ಆದರೆ ದುರದೃಷ್ಟವಶಾತ್ ಅಫ್ಜಲ್ ಮರಣದಂಡನೆಗೂ ಒಂಬತ್ತು ತಿಂಗಳ ಮೊದಲು ಅವರು ಫೆಬ್ರವರಿ 2013ರಲ್ಲಿ ನಿಧನರಾಗಿದ್ದರು. ನನ್ನ ತಂದೆ ತಮ್ಮ 47 ವರ್ಷಗಳ ಸೇವೆಯಲ್ಲಿ 12 ಕೈದಿಗಳನ್ನು ಗಲ್ಲಿಗೇರಿಸಿದ್ದಾರೆ ಎಂದು ತಿಳಿಸಿದ್ದಾರೆ.

‘ಭಾರತದಲ್ಲಿ ನೇಣು ಹಾಕುವ ವ್ಯಕ್ತಿಗಳಲ್ಲಿ ಹೆಚ್ಚಿನವರು ತಲಾತಲಾಂತದಿಂದ ಬಂದವರಾಗಿದ್ದಾರೆ. ಆದರೆ ನನ್ನ ಮಕ್ಕಳು ನನ್ನ ಹೆಜ್ಜೆಗಳನ್ನು ಅನುಸರಿಸಬೇಕೆಂದು ನಾನು ಬಯಸುವುದಿಲ್ಲ ಎಂದು ಪವನ್ ಜಲ್ಲಾದ್ ಹೇಳಿದ್ದಾರೆ. ಇದನ್ನೂ ಓದಿ: ನನ್ನ ಮಗನನ್ನು ಜೈಲಿನಲ್ಲಿಯೇ ಸುರಕ್ಷಿತವಾಗಿ ನೋಡಿಕೊಳ್ಳಿ: ವೈರಲ್ ಆಯ್ತು ಅಪರಾಧಿ ತಾಯಿಯ ವಿಡಿಯೋ

Share This Article
Leave a Comment

Leave a Reply

Your email address will not be published. Required fields are marked *