ನಿರ್ಮಲಾ ಸೀತಾರಾಮನ್ ಹೊಗಳಿಕೆಯನ್ನೇ ತಮ್ಮ ಮೈಲೇಜ್‍ಗೆ ಬಳಸಿಕೊಂಡ್ರಾ ಚೈತ್ರಾ?

By
1 Min Read

ಉಡುಪಿ/ಬೆಂಗಳೂರು: 2018ರಲ್ಲಿ ಕಾಂಗ್ರೆಸ್ (Congress) ಕರೆ ನೀಡಿದ್ದ ಭಾರತ್ ಬಂದ್ (Bharat Bandh) ವಿರೋಧಿಸಿ ಚೈತ್ರಾ ಕುಂದಾಪುರ (Chaitra Kundapura) ಭಾರೀ ಸದ್ದು ಮಾಡಿದ್ರು. ಇದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitaraman) ಗಮನ ಸೆಳೆದಿತ್ತು.

ಡೇರಿಂಗ್ ಗರ್ಲ್ ಎಂದು ಟ್ವೀಟಿಸಿ ಬೆನ್ನುತಟ್ಟಿದ್ರು. ಇದನ್ನೇ ಚೈತ್ರಾ ತಮ್ಮ ಮೈಲೇಜ್‍ಗೆ ಬಳಸಿಕೊಂಡಿದ್ರು. ತಮಗೆ ಕೇಂದ್ರದ ಲಿಂಕ್ ಇದೆ ಎಂದು ಬಿಂಬಿಸಿಕೊಂಡಿದ್ರು. ಮುಂದೆ ನಾನೇ ಬೈಂದೂರು ಎಂಎಲ್‍ಎ ಆಗ್ತೀನಿ. ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಾನೇ ಆಗ್ತೀನಿ ಎಂದು ಹೇಳ್ಕೊಂಡು ಓಡಾಡ್ತಿದ್ರು.

ಗೋವಿಂದ ಪೂಜಾರಿಗೂ ಇದೇ ಕತೆಯನ್ನು ಹೇಳಿ ಚೈತ್ರಾ ವಂಚಿಸಿದ್ರು ಎಂಬ ವಿಚಾರ ಬಯಲಾಗಿದೆ. ಈ ವಂಚನೆ ಪುರಾಣ ಬಯಲಾದ ಬೆನ್ನಲ್ಲೇ ಆರೋಪಿ ಚೈತ್ರಾರಿಂದ ಬಿಜೆಪಿ ನಾಯಕರು ಅಂತರ ಕಾಯ್ದುಕೊಳ್ಳತೊಡಗಿದ್ದಾರೆ. ಉಪ್ಪು ತಿಂದವರು ನೀರು ಕುಡಿಯಲೇಬೇಕು. ಈ ಬಗ್ಗೆ ಸಮಗ್ರ ತನಿಖೆ ಆಗಬೇಕು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ (Shobha Karandlaje) ಹೇಳಿದ್ದಾರೆ. ಇದನ್ನೂ ಓದಿ: EXCLUSIVE: ಗೋವಿಂದ ಬಾಬು ಪೂಜಾರಿ ಕಚೇರಿಯಲ್ಲಿ ವಿಷ ಕುಡಿಯೋ ನಾಟಕವಾಡಿದ್ದ ಗಗನ್!

ಬಿಜೆಪಿಯಲ್ಲಿ ಟಿಕೆಟ್ ಸೇಲ್‍ಗಿಲ್ಲ ಎನ್ನುವುದು ಇದ್ರಿಂದ ಗೊತ್ತಾಗ್ತಿದೆ ಎಂದು ಸಿಟಿ ರವಿ ಹೇಳ್ಕೊಂಡಿದ್ದಾರೆ. ನಮ್ಮ ಪಕ್ಷದ ಒಳಗೆ ಇದಕ್ಕೆಲ್ಲ ಅವಕಾಶ ಇಲ್ಲ ಎಂದು ಅಶ್ವಥ್‍ನಾರಾಯಣ್ ಹೇಳಿಕೆ ನೀಡಿದ್ದಾರೆ.

Web Stories

Share This Article
ಮಳೆಗಾಲದಲ್ಲಿ ಪಡ್ಡೆಗಳ ಮೈಚಳಿ ಬಿಡಿಸಿದ ತಮನ್ನಾ ಹಾಟ್‌ ಲುಕ್‌ ಯೋಗ ದಿನದಂದು ನಟಿ ಪ್ರಣಿತಾ ಯೋಗ… ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್