ಸಿದ್ದರಾಮಯ್ಯಗೆ ನಿಖಿಲ್ ಆಹ್ವಾನ – ಮಂಡ್ಯದಲ್ಲಿ ನಡೆಯುತ್ತಾ ಮಾಜಿ ಸಿಎಂ ಕ್ಯಾಂಪೇನ್?

Public TV
1 Min Read

ಬೆಂಗಳೂರು: ಪ್ರಚಾರಕ್ಕೆ ಬರುವಂತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಮಂಡ್ಯ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರು ಆಹ್ವಾನ ಮಾಡಿದ್ದಾರೆ.

ನಗರದಲ್ಲಿ ಸಿದ್ದರಾಮಯ್ಯನವರನ್ನು ಭೇಟಿಯಾದ ನಿಖಿಲ್, ಸಾರ್ ನೀವು ಪ್ರಚಾರಕ್ಕೆ ಬನ್ನಿ. ನಿಮ್ಮ ಆಶೀರ್ವಾದ ನನಗೆ ಬೇಕು. ಹಿಂದಿನದ್ದು ಬಿಟ್ಟು ಬಿಡಿ, ನಾನು ಭವಿಷ್ಯದ ಬಗ್ಗೆ ಯೋಜನೆ ಮಾಡುವವನು. ಹೀಗಾಗಿ ಮುನಿಸು ಮರೆತು ಪ್ರಚಾರಕ್ಕೆ ಬನ್ನಿ ಎಂದು ಮನವಿ ಮಾಡಿದ್ದಾರೆ ಎನ್ನಲಾಗಿದೆ.

ಸಿದ್ದರಾಮಯ್ಯ ಮನಗೆಲ್ಲಲು ಮಾತು ಮಾತಿಗೂ ಸರ್ ನಿಮ್ಮ ಸಹಕಾರ ಮುಖ್ಯ ಎಂದು ನಿಖಿಲ್ ಹೇಳಿದ್ದು, ಮಂಡ್ಯದಲ್ಲಿ ಆದಷ್ಟು ಹೆಚ್ಚು ಪ್ರಚಾರ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ ಎಂಬ ಮಾಹಿತಿ ಲಭಿಸಿದೆ.

ಕಾಂಗ್ರೆಸ್ ನಾಯಕ ಚೆಲುವರಾಯಸ್ವಾಮಿ ಮನವೊಲಿಸುವಂತೆಯೂ ನಿಖಿಲ್ ಇದೇ ವೇಳೆ ಕೇಳಿಕೊಂಡಿದ್ದು, ಮಂಡ್ಯ ಕೈ ನಾಯಕರಿಗೆ ಬುದ್ಧಿ ಹೇಳುವಂತೆ ಕೂಡ ಹೇಳಿದ್ದಾರೆ. ನಿಖಿಲ್ ಆಹ್ವಾನಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಿದ್ದರಾಮಯ್ಯ, ಆದಷ್ಟು ಎಲ್ಲ ಅಡೆತಡೆ ನಿವಾರಿಸುವ ಭರವಸೆ ನೀಡಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

Share This Article
Leave a Comment

Leave a Reply

Your email address will not be published. Required fields are marked *