ಮುಂದೆ ರಾಮನಗರದಲ್ಲೇ ಚುನಾವಣೆಗೆ ನಿಲ್ಲುತ್ತೇನೆ – ನಿಖಿಲ್‌ ಕುಮಾರಸ್ವಾಮಿ

Public TV
2 Min Read

ರಾಮನಗರ: ನಾನು ಮುಂದೆ ಚುನಾವಣೆ ನಿಲ್ಲುವ ಸಂದರ್ಭ ಬಂದರೆ ನಾನು ರಾಮನಗರದಲ್ಲೇ ನಿಲ್ತೇನೆ ಎಂದು ಜೆಡಿಎಸ್‌ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಹೇಳಿದ್ದಾರೆ.

ಜಿಲ್ಲೆಯಲ್ಲಿ ಎರಡನೇ ದಿನದ ಜೆಡಿಎಸ್ ಸದಸ್ಯತ್ವ ನೋಂದಣಿ ಅಭಿಯಾನ ಮುಂದುವರೆದಿದ್ದು, ರಾಮನಗರ ವಿಧಾನಸಭಾ ಕ್ಷೇತ್ರದ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ನಿಖಿಲ್ ಕುಮಾರಸ್ವಾಮಿ ಚಾಲನೆ ನೀಡಿದ್ರು. ಬಳಿಕ ಕಾರ್ಯಕರ್ತರ ಸಭೆ ನಡೆಸಿ ಮಾತನಾಡಿದ ಅವರು, ಕುಮಾರಣ್ಣನವರು ನನಗೆ ಸಾಕಷ್ಟು ಬಾರಿ ಹೇಳಿದ್ದಾರೆ. ರಾಮನಗರಕ್ಕೆ ಒಂದೇ ಒಂದು ದಿನ ಹೋಗಿಲ್ಲ ಅಂದ್ರೂ ಅಲ್ಲಿನ ಜನ ನನ್ನ ಮುಖ್ಯಮಂತ್ರಿ ಮಾಡಿದ್ರು ಅಂತ. ಅಷ್ಟು ಪ್ರೀತಿ ರಾಮನಗರ ಜನ ತೋರಿಸ್ತಾರೆ. ನಮ್ಮ ಕುಟುಂಬಕ್ಕೆ 6 ಬಾರಿ ಇಲ್ಲಿಂದ ಅವಕಾಶ ಕೊಟ್ಟಿದ್ದೀರಿ. ನಾನು ಮುಂದೆ ಚುನಾವಣೆ ನಿಲ್ಲುವ ಸಂದರ್ಭ ಬಂದರೆ ನಾನು ರಾಮನಗರದಲ್ಲೇ ನಿಲ್ತೇನೆ ಎಂದಿದ್ದಾರೆ. ಇದನ್ನೂ ಓದಿ: ಕೋಮುಲ್ ಚುನಾವಣೆಯಲ್ಲಿ ಹಣದ ಹೊಳೆ – ಒಂದೊಂದು ಮತಕ್ಕೆ 5 ರಿಂದ 7 ಲಕ್ಷ ಸಂದಾಯ

ಯಾರು ಕೂಡ ಮನಸ್ಸಿನಲ್ಲಿ ಗೊಂದಲ ಇಟ್ಟುಕೊಳ್ಳಬೇಡಿ. ನಾನು ಕಳೆದ ಚುನಾವಣೆಯಲ್ಲಿ ಕೊನೇ ಕ್ಷಣದಲ್ಲಿ ರಾಮನಗರ ನಿಲ್ಲಬೇಕು ಅಂತಾ ತೀರ್ಮಾನ ಮಾಡಿದ್ದೆ. ನಾನು ಬೇರೆ ತೀರ್ಮಾನ ಕೂಡ ತೆಗೆದುಕೊಳ್ಳಬಹುದಿತ್ತು. ಆದ್ರೆ ಈ ಕ್ಷೇತ್ರದ ಜನ ನಮ್ಮ ಕುಟುಂಬದ ಮೇಲೆ ಇಟ್ಟಿರೋ ಪ್ರೀತಿಗೆ ನಾವು ಜಿಲ್ಲೆ ಬಿಡಬಾರದು ಅಂತಾ ಇಲ್ಲೆ ಸ್ಪರ್ಧೆ ಮಾಡಿದೆ. ನಾವೇನಾದ್ರೂ ಜಿಲ್ಲೆ ಬಿಟ್ಟು ಹೋದ್ರೆ ಜಿಲ್ಲೆಯ ಜನರ ಪರಿಸ್ಥಿತಿ ಏನು ಅಂತಾ ಯೋಚನೆ ಮಾಡಿದ್ವಿ. ನಾನು ಬಹಳ ಚಿಕ್ಕೋನು, ಇಲ್ಲಿ ಸಾಕಷ್ಟು ಹಿರಿಯರಿದ್ದಾರೆ‌. ನನ್ನಿಂದ ಏನಾದ್ರೂ ತಪ್ಪು ನಡೆದಿದ್ರೆ ಕ್ಷಮೆ ಕೇಳ್ತೇನೆ ಎಂದು ಹೇಳಿದರು. ಇದನ್ನೂ ಓದಿ: ಅವಧಿಗೂ ಮುನ್ನ ಅರ್ಧದಷ್ಟು ಭರ್ತಿಯಾದ ಟಿಬಿ ಡ್ಯಾಂ – ಜು.1ಕ್ಕೆ ಕಾಲುವೆಗೆ ನೀರು ಬಿಡುಗಡೆ ಸಾಧ್ಯತೆ

ದಯಮಾಡಿ ನನ್ನನ್ನು ಕ್ಷಮಿಸಿ ಬಿಡಿ. ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ ಇದೇ ರೀತಿ, ಬೆಂಕಿ ಜ್ವಾಲೆ ಇತ್ತು. ನನ್ನ ಚುನಾವಣೆ ಇಡೀ ರಾಜ್ಯ ನೋಡುತ್ತೆ. ರಾಜ್ಯದ ಜನರಿಗೆ ನನ್ನ ಸೋಲಿನ ವಾಸ್ತವದ ಅರಿವಿಲ್ಲ. ನನ್ನ ಸೋಲಿನ ಬಗ್ಗೆ ಈಗ ಮಾತಾಡೊಲ್ಲ, ಯಾಕೆಂದ್ರೆ ನಾವು ಎರಡು ಪಕ್ಷದವರು ಮೈತ್ರಿ ಮಾಡಿಕೊಂಡು ರಾಜ್ಯದ ಸಮಗ್ರ ಅಭಿವೃದ್ಧಿಗೆ ಒಂದಾಗಿದ್ದೇವೆ‌ ಎಂದ ನಿಖಿಲ್ ಕುಮಾರಸ್ವಾಮಿ, ಮುಂದಿನ ಚುನಾವಣೆಯಲ್ಲಿ ರಾಮನಗರದಿಂದ ಸ್ಪರ್ಧೆ ಬಗ್ಗೆ ಕಾರ್ಯಕರ್ತರ ಸಭೆಯಲ್ಲಿ ಘೋಷಣೆ ಮಾಡಿದ್ದಾರೆ. ಇದನ್ನೂ ಓದಿ: ಸೈಬರ್‌ ಪೊಲೀಸರ ಸೋಗಿನಲ್ಲಿ ಬ್ಲ್ಯಾಕ್‌ಮೇಲ್‌ – ಖರ್ತನಾಕ್‌ ಲೇಡಿ ಸೇರಿ 7 ಲಕ್ಷ ಸುಲಿಗೆ ಮಾಡಿದ್ದ ಐವರು ಅರೆಸ್ಟ್‌

Share This Article