‘ಯಾರನ್ನೋ ಮದ್ವೆಯಾಗಿ ಮಂಡ್ಯ ಅಳಿಯನಾಗ್ಬೇಕಿಲ್ಲ, ನಾನು ಮಂಡ್ಯದ ಮಗ’ ಅಭಿ ಹೇಳಿಕೆಗೆ ನಿಖಿಲ್ ಟಾಂಗ್

Public TV
1 Min Read

ಮಂಡ್ಯ: ನಾನು ಮಂಡ್ಯದ ಅಳಿಯನಲ್ಲ. ನಾನು ಮಂಡ್ಯದ ಮಗ ಎಂಬ ಯಂಗ್ ರೆಬೆಲ್ ಸ್ಟಾರ್ ಅಭಿಷೇಕ್ ಹೇಳಿಕೆಗೆ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.

ಮದ್ದೂರಿನಲ್ಲಿ ಮಾತನಾಡಿದ ನಿಖಿಲ್, ನಾಟಕ ಯಾರು ಮಾಡುತ್ತಿದ್ದಾರೆ ಎಂದು ಮಂಡ್ಯ ಜಿಲ್ಲೆಯ ಜನತೆ ಬಹಳ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಸರ್ಕಾರ ಇಲ್ಲದೇ ಹೋದ ಸಂದರ್ಭದಲ್ಲೂ ಕೂಡ ಕುಮಾರಣ್ಣ ರೈತರ ಪರ ನಿಂತಿದ್ದ ಒಬ್ಬರೇ ಒಬ್ಬ ವ್ಯಕ್ತಿ ಎಂದು ಬಹಳ ಹೆಮ್ಮೆ ಎಂದು ಹೇಳಲು ಇಷ್ಟಪಡುತ್ತೀನಿ. ಯಾರು ನಾಟಕ ಮಾಡುತ್ತಿದ್ದಾರೆ ಎಂಬುದು ಮುಂದಿನ ತಿಂಗಳು 18ರಂದು ಜನರು ತೀರ್ಮಾನ ಮಾಡುತ್ತಾರೆ ಎಂದು ನಿಖಿಲ್ ತಿರುಗೇಟು ನೀಡಿದ್ದಾರೆ.

ಅಭಿಷೇಕ್ ಹೇಳಿದ್ದೇನು?
ನಾನು ಮಂಡ್ಯ ಕ್ಷೇತ್ರಕ್ಕೆ ನಿನ್ನೆ ಮೊನ್ನೆ ಬಂದಿಲ್ಲ. ಇಲ್ಲಿನ ಹುಡುಗಿಯನ್ನು ಮದುವೆಯಾಗಿ ಮಂಡ್ಯದವನೆಂದು ಕರೆಸಿಕೊಳ್ಳುವ ಅವಶ್ಯಕತೆ ನನಗಿಲ್ಲ. ನಾನು ಮಂಡ್ಯದ ಅಳಿಯನಲ್ಲ. ನಾನು ಮಂಡ್ಯದ ಮಗ ಎಂದು ಸ್ನೇಹಿತ, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ನಿಖಿಲ್ ಅವರಿಗೆ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದರು.

Share This Article
Leave a Comment

Leave a Reply

Your email address will not be published. Required fields are marked *