ನಿಖಿಲ್ ವಿರುದ್ಧ ಟೀಕೆ – ನೆಟ್ಟಿಗರ ಮೇಲೆ ಪೊಲೀಸರ ಕಣ್ಣು

Public TV
1 Min Read

ಮಂಡ್ಯ: ಲೋಕಸಭೆ ಚುನಾವಣೆಯ ಮೈತ್ರಿ ಪಕ್ಷದ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ವಿರೋಧಿಸಿ ಸಾಮಾಜಿಕ ಜಾಲತಾಣಗಳಲ್ಲಿ ಟೀಕಿಸುತ್ತಿರುವ ವ್ಯಕ್ತಿಗಳ ಮೇಲೆ ಪೊಲೀಸರು ಕಣ್ಣನ್ನು ಇಟ್ಟಿದ್ದಾರೆ.

ನಿಖಿಲ್ ಗೋ ಬ್ಯಾಕ್ ಚಳುವಳಿ ಸೇರಿದಂತೆ ಜೆಡಿಎಸ್ ನಡೆ ಬಗ್ಗೆ ಭಾರೀ ಟೀಕೆ ವ್ಯಕ್ತವಾಗಿದೆ. ಇದರಿಂದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿರುವ ಹಾಗೂ ಜೆಡಿಎಸ್ ವಿರುದ್ಧ ಧ್ವನಿ ಎತ್ತುವವರ ಹಿಂದೆ ಯಾರಿದ್ದಾರೆ ಎಂದು ಪತ್ತೆ ಹಚ್ಚಲು ಗುಪ್ತಚರ ಇಲಾಖೆ ಮುಂದಾಗಿದೆ.

 

ಜೆಡಿಎಸ್ ಬಗ್ಗೆ ಆಕ್ಷೇಪ, ಆಕ್ರೋಶ ಹೊರ ಹಾಕುತ್ತಿರುವವರು ನಿಜವಾಗಲೂ ಪಕ್ಷದ ಕಾರ್ಯಕರ್ತರೇ ಎನ್ನುವುದನ್ನು ಪತ್ತೆ ಹಚ್ಚಲು ಸಿಎಂ ಕುಮಾರಸ್ವಾಮಿ ಗುಪ್ತಚರ ಇಲಾಖೆಗೆ ಸೂಚಿಸಿದ್ದಾರೆ ಎನ್ನಲಾಗಿದೆ.

ಸೂಚನೆ ಬಂದ ಹಿನ್ನೆಲೆಯಲ್ಲಿ ಈಗಾಗಲೇ ಕಾರ್ಯಪ್ರವೃತ್ತರಾಗಿರುವ ಪೊಲೀಸರು ಪೋಸ್ಟ್ ಹಾಕುತ್ತಿರುವರ ಮಾಹಿತಿ ಕಲೆ ಹಾಕಲಾರಂಭಿಸಿದ್ದಾರೆ. ಮಾಹಿತಿ ಸಂಗ್ರಹಕ್ಕಾಗಿ ರಾಜ್ಯದ ಇಂಟಲಿಜೆನ್ಸ್ ಪೊಲೀಸರಿಗೆ ಈ ಜವಾಬ್ದಾರಿಯನ್ನು ನೀಡಲಾಗಿದೆ ಎನ್ನಲಾಗುತ್ತಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *