ವೀಸಾ ಮುಗಿದ್ರೂ ಭಾರತದಲ್ಲೇ ನೆಲೆಸಿ ಮಾದಕವಸ್ತು ಮಾರಾಟ: ಪೊಲೀಸ್ರ ಕಣ್ತಪ್ಪಿಸಲು ಹೋಗಿ ನೈಜೀರಿಯಾ ಪ್ರಜೆ ಸಾವು

Public TV
1 Min Read

ಬೆಂಗಳೂರು: ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ನೈಜೀರಿಯಾ ಮೂಲದ ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ನಡೆದಿದೆ.

ಇನ್ಯಾಂಪ್ಟಿ ಕ್ರಿಸ್ಟಾನಿಯನ್ ಮೃತ ನೈಜೀರಿಯಾ ಪ್ರಜೆ. ಈತ 2012ರಲ್ಲಿ ಬಿಜಿನೆಸ್ ವೀಸಾ ಮೇಲೆ ಭಾರತಕ್ಕೆ ಬಂದಿದ್ದನು. ಐದು ವರ್ಷದ ಹಿಂದೆಯೇ ಈತನ ವೀಸಾ ಕಾಲಾವಧಿ ಮುಕ್ತಾಯವಾಗಿದ್ದು, 2015 ರಲ್ಲಿ ಪಾಸ್ ಪೋರ್ಟ್ ನ ಕಾಲಾವಧಿಯೂ ಮುಕ್ತಾಯವಾಗಿತ್ತು. ಆದ್ರೂ ಈತ ಭಾರತದಲ್ಲಿಯೇ ನೆಲಸಿ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದನು.

ಹೀಗಾಗಿ ಕಳೆದ ವಾರ ಈ ಬಗ್ಗೆ ಮಾಹಿತಿ ಪಡೆದ ಸಿಸಿಬಿ ಪೊಲೀಸರು ದಾಳಿ ಮಾಡಲು ತೆರಳಿದ್ರು. ಇತ್ತ ಪೊಲೀಸರ ದಾಳಿ ವಿಚಾರ ತಿಳಿದ ಇನ್ಯಾಂಪ್ಟಿ ಕ್ರಿಸ್ಟಾನಿಯನ್ ಅವರಿಂದ ತಪ್ಪಿಸಿಕೊಳ್ಳಲು ಹೋಗಿ ಬೈಕ್ ನಿಂದ ಬಿದ್ದು ಸಾವನ್ನಪ್ಪಿದ್ದಾನೆ.

Share This Article
Leave a Comment

Leave a Reply

Your email address will not be published. Required fields are marked *