ಹಂಪಿ ಉತ್ಸವದಲ್ಲಿ ವಾರ್ತಾ ಇಲಾಖೆ ಸಿಬ್ಬಂದಿ ಸಾವು

Public TV
1 Min Read

ಬಳ್ಳಾರಿ: ಹಂಪಿ ಉತ್ಸವದಲ್ಲಿ ಎರಡನೇ ದಿನವೂ ಮತ್ತೊಂದು ಅವಘಡ ಸಂಭವಿಸಿದೆ. ಹೃದಯಾಘಾತದಿಂದ ವಾರ್ತಾ ಇಲಾಖೆ ಚಾಲಕರೊಬ್ಬರು ಸಾವನಪ್ಪಿದ ದುರ್ಘಟನೆ ನಡೆದಿದೆ.

ಕೊಪ್ಪಳದ ವಾರ್ತಾ ಇಲಾಖೆಯ ಚಾಲಕ 50 ವರ್ಷದ ವೆಂಕಟೇಶ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಪ್ರಿಯದರ್ಶನಿ ಹೋಟೆಲ್ ನಲ್ಲಿ ತಂಗಿದ್ದ ಸಂದರ್ಭದಲ್ಲಿ ಹೃದಯಾಘಾತಗೊಂಡು ಹೋಟೆಲ್‍ನಲ್ಲಿಯೇ ಸಾವಿಗೆ ಶರಣಾಗಿದ್ದಾರೆ.

ಶನಿವಾರ ತಡರಾತ್ರಿ ಹಂಪಿ ಉತ್ಸವ ಮುಕ್ತಾಯಗೊಳಿಸಿ ವಾಹನದಲ್ಲಿದ್ದ ಪತ್ರಕರ್ತರು ನಿಗದಿತ ಸ್ಥಳಕ್ಕೆ ತಲುಪಿದ್ದಾರೆ. ಆದರೆ ಮರುಕ್ಷಣವೇ ವೆಂಕಟೇಶ್‍ಗೆ ಆರೋಗ್ಯದಲ್ಲಿ ಏರುಪೇರಾಗಿ ಹೃದಯಾಘಾತಕ್ಕೆ ಒಳಗಾಗಿದ್ದು, ಮೃತಪಟ್ಟಿದ್ದಾರೆ. ಆದರೂ ಪರೀಕ್ಷೆ ಮಾಡಿಸಲು ಪತ್ರಕರ್ತರು ಅವರನ್ನು ಹೊಸಪೇಟೆಯ ಆಸ್ಪತ್ರೆಗೆ ಕರೆದೊಯ್ಯಿದಿದ್ದಾರೆ. ಅಲ್ಲಿ ವೈದ್ಯರು ಪರೀಕ್ಷೆ ಮಾಡಿ ಸಾವನ್ನಪ್ಪಿರುವುದನ್ನು ಖಚಿತ ಪಡಿಸಿದ್ದಾರೆ.

ವೆಂಕಟೇಶ್ ಅಕಾಲಿಕ ಮರಣಕ್ಕೆ ಎರಡೂ ಜಿಲ್ಲೆಗಳ ಪತ್ರಕರ್ತರು ಕಂಬನಿ ಮಿಡಿದಿದ್ದಾರೆ. ವೆಂಕಟೇಶರನ್ನು ಹಂಪಿ ಉತ್ಸವದ ಹಿನ್ನಲೆಯಲ್ಲಿ ಕಳೆದ ಎರಡು ದಿನಗಳಿಂದ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು.

 

Share This Article
Leave a Comment

Leave a Reply

Your email address will not be published. Required fields are marked *