5ನೇ ಮಹಡಿಯಿಂದ ಹಾರಿ ನವವಿವಾಹಿತೆ ಆತ್ಮಹತ್ಯೆ

Public TV
1 Min Read

ಹೈದರಾಬಾದ್: ಕಟ್ಟಡದಿಂದ ಹಾರಿ ನವವಿವಾಹಿತೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಶನಿವಾರ ಆಂಧ್ರ ಪ್ರದೇಶದ ವನಾಸ್ತಳಿಪುರಂನಲ್ಲಿ ನಡೆದಿದೆ.

ನಿವೇದಿತಾ ಆತ್ಮಹತ್ಯೆ ಮಾಡಿಕೊಂಡ ನವವಿವಾಹಿತೆ. ನಿವೇದಿತಾ 6 ತಿಂಗಳ ಹಿಂದೆ ಟೆಕ್ಕಿ ರಘು ಪ್ರಸಾದ್‍ರನ್ನು ಮದುವೆ ಆಗಿದ್ದಳು. ಮದುವೆಯಾದ ಬಳಿಕ ಸಾಯಿನಗರದಲ್ಲಿ ವಾಸಿಸುತ್ತಿದ್ದರು. ಮದುವೆ ಆದ ನಂತರ ಕುಟುಂಬದ ವಿಷಯಕ್ಕಾಗಿ ವಿವೇದಿತಾ ಹಾಗೂ ರಘು ಮಧ್ಯೆ ಜಗಳ ನಡೆಯುತಿತ್ತು.

ಶನಿವಾರ ಕೂಡ ನಿವೇದಿತಾ ಹಾಗೂ ರಘು ಜಗಳವಾಡಿದ್ದಾರೆ. ಜಗಳದಿಂದ ಬೇಸತ್ತ ನಿವೇದಿತಾ ಕಟ್ಟಡದ 5ನೇ ಮಹಡಿಯಿಂದ ಜಿಗಿದಿದ್ದಾಳೆ. ಇದರಿಂದ ತೀವ್ರ ಗಾಯಗೊಂಡ ನಿವೇದಿತಾ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಪೊಲೀಸರು, ನಿವೇದಿತಾ ಮೃತದೇಹವನ್ನು ಉಸ್ಮಾನಿಯಾ ಜನರಲ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆಂದು ಕಳುಹಿಸಿದ್ದರು.

ರಘು ಪ್ರಸಾದ್ ಹಾಗೂ ಆತನ ಕುಟುಂಬದವರು ನನ್ನ ಮಗಳಿಗೆ ಕಿರುಕುಳ ನೀಡುತ್ತಿದ್ದರು. ತನ್ನ ಪತಿಯ ಹಾಗೂ ಅವರ ಕುಟುಂಬದವರ ಕಿರುಕುಳ ತಾಳಲಾರದೇ ತಮ್ಮ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ನಿವೇದಿತಾ ಪೋಷಕರು ರಘು ಪ್ರಸಾದ್ ಹಾಗೂ ಆತನ ಮನೆಯವರ ದೂರು ನೀಡಿದ್ದಾರೆ.

ಪೊಲೀಸರು ರಘು ಪ್ರಸಾದ್ ಹಾಗೂ ಆತನ ಮನೆಯವರ ವಿರುದ್ಧ ದೂರು ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *