ಸುಬ್ರಹ್ಮಣ್ಯದಲ್ಲಿ ಸಿಡಿಲಿಗೆ ನವ ವಿವಾಹಿತ ಬಲಿ

Public TV
0 Min Read

ಮಂಗಳೂರು: ಸಿಡಿಲು (Lightning) ಬಡಿದು ನವ ವಿವಾಹಿತ (Newly Married) ಸಾವನ್ನಪ್ಪಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಸುಬ್ರಹ್ಮಣ್ಯದಲ್ಲಿ (Subramanya) ನಡೆದಿದೆ.

ಪರ್ವತಮುಖಿ ನಿವಾಸಿ ಸೋಮಸುಂದರ್ (34) ಮೃತಪಟ್ಟ ನವ ವಿವಾಹಿತ. ಸಂಜೆಯ ವೇಳೆ ಮಳೆ (Rain) ಮುನ್ಸೂಚನೆ ಹಿನ್ನಲೆ ಅಂಗಳದಲ್ಲಿದ್ದ ಅಡಿಕೆಯನ್ನು ಸೋಮಸುಂದರ್‌ ರಾಶಿ ಮಾಡುತ್ತಿದ್ದರು.

ಕೆಲಸ ಮಾಡುತ್ತಿದ್ದಾಗ ಸೋಮಸುಂದರ್‌ ಅವರಿಗೆ ಸಿಡಿಲು ಬಡಿದಿದೆ. ಕೂಡಲೇ ಅವರನ್ನು ವಾಹನದಲ್ಲಿ ಆಸ್ಪತ್ರೆಗೆ ಸಾಗಿಸುತ್ತಿದ್ದಾಗ ಮೃತಪಟ್ಟಿದ್ದಾರೆ. ಹತ್ತು ದಿನದ ಹಿಂದೆಯಷ್ಟೇ ಸೋಮಸುಂದರ್ ಅವರ ವಿವಾಹ ನಡೆದಿತ್ತು.

Share This Article