ಗಂಡ ಡ್ಯೂಟಿಯಲ್ಲಿ, ಪತ್ನಿ ಇನ್ಸ್ ಪೆಕ್ಟರ್ ತೆಕ್ಕೆಯಲ್ಲಿ ಪ್ರಕರಣಕ್ಕೆ ಹೊಸ ಟಿಸ್ಟ್!

Public TV
2 Min Read

ಬಳ್ಳಾರಿ: ಪೊಲೀಸ್ ಪೇದೆ ಡ್ಯೂಟಿಯಲ್ಲಿದ್ದಾಗ ಆತನ ಪತ್ನಿಯೊಂದಿಗೆ ಪಲ್ಲಂಗದಾಟವಾಡಿದ ಪೊಲೀಸ್ ಇನ್ಸಪೆಕ್ಟರ್ ಸುದ್ದಿಯನ್ನು ನಿಮ್ಮ ಪಬ್ಲಿಕ್ ಟಿವಿ ಇಂದು ಬೆಳಗ್ಗೆ ಸುದ್ದಿ ಬಿತ್ತರ ಮಾಡಿತ್ತು. ಆದ್ರೆ ಪಿಎಸ್‍ಐಯೊಂದಿಗಿನ ಅನೈತಿಕ ಸಂಬಂಧವನ್ನು ಪೇದೆ ಪತ್ನಿ ಸಮರ್ಥನೆ ಮಾಡಿಕೊಂಡ ವಿಚಾರ ಇದೀಗ ಬಯಲಿಗೆ ಬಂದಿದೆ.

ಪಲ್ಲಂಗದಾಟದ ವೇಳೆ ಕ್ವಾರ್ಟರ್ಸ್ ಸುಟ್ಟ ಪ್ರಕರಣದ ಬಗ್ಗೆ ತನಿಖೆ ನಡೆಸಲು ಹೋದ ಅಧಿಕಾರಿಗಳ ಮುಂದೆ ಪೇದೆಯ ಪತ್ನಿ ಶಿಲ್ಪಾ ರಂಪಾಟ ನಡೆಸಿದ ವಿಚಾರ ಇದೀಗ ಬಯಲಾಗಿದೆ. ಕ್ವಾರ್ಟರ್ಸ್ ಗೆ ಬೆಂಕಿ ಬಿದ್ದ ನಂತರ ವಿಚಾರಣೆಗೆ ಹೋದ ಅಧಿಕಾರಿಗಳ ಮುಂದೆ ಇದು ನನ್ನ ವೈಯಕ್ತಿಯ ವಿಚಾರ. ನಾನು ಏನಾದ್ರೂ ಮಾಡ್ಕೋತೇನಿ ನಿಮಗ್ಯಾಕೆ ಅಂತಾ ತನಿಖಾಧಿಕಾರಿಗಳನ್ನೆ ತರಾಟೆಗೆ ತೆಗೆದುಕೊಂಡು ಅನೈತಿಕ ಸಂಬಂಧವನ್ನು ಸಮರ್ಥನೆ ಮಾಡಿಕೊಡಿದ್ದಾರೆ.

ಏನಿದು ಘಟನೆ?
ಕಿರಣ ಸಾಮ್ರಾಟ್ ಬಳ್ಳಾರಿ ಪೊಲೀಸ್ ಇಲಾಖೆಯ ವೈರ್ ಲೆಸ್ ವಿಭಾಗದ ಪಿಎಸ್‍ಐಯಾಗಿದ್ದು, ಈತ ಪೊಲೀಸ್ ಪೇದೆಯೊಬ್ಬರ ಪತ್ನಿಯ ಜೊತೆ ಅನೈತಿಕ ಸಂಬಂಧ ಹೊಂದಿದ್ದನು. ಇಬ್ಬರು ಪೊಲೀಸ್ ಇಲಾಖೆಯ ಡಿಆರ್ ಕ್ವಾರ್ಟರ್ಸ್ ನ ಮನೆಯಲ್ಲಿ ಕುಡಿದು ಸಿಗರೇಟ್ ಸೇದಿ ಮನೆತುಂಬಾ ಬಿಸಾಕಿ ಪಲ್ಲಂಗದಾಟವಾಡುತ್ತಿದ್ದರಂತೆ. ಈ ವೇಳೆ ಕ್ವಾರ್ಟರ್ಸ್ ಗೆ ಬೆಂಕಿ ಬಿದ್ದಿದ್ದು, ಮನೆಯೆಲ್ಲಾ ಸುಟ್ಟು ಹೋಗಿದೆ.

ಪಿಎಸ್‍ಐ ಕಿರಣ ಸಾಮ್ರಾಟ್ ಹಾಗೂ ಪೇದೆಯ ಪತ್ನಿಯ ಮಧ್ಯೆ ಹಲವಾರು ದಿನಗಳಿಂದ ಅನೈತಿಕ ಸಂಬಂಧವಿತ್ತು. ಇಬ್ಬರ ಮಧ್ಯೆ ಇತ್ತೀಚೆಗೆ ಸಣ್ಣ ಮಟ್ಟದ ಮನಸ್ತಾಪ ಸಹ ಏರ್ಪಟ್ಟಿತ್ತು. ಹೀಗಾಗಿ ಪಿಎಸ್‍ಐ ಕಿರಣ ಸಾಮ್ರಾಟರ ಮನೆಯಲ್ಲಿ ಎರಡು ದಿನಗಳ ಕಾಲ ಪೇದೆಯ ಪತ್ನಿ ವಾಸವಿದ್ದಳು. ಆಗ ಆಕೆಯನ್ನು ಸಮಾಧಾನಪಡಿಸಿದ ಪಿಎಸ್‍ಐ ಆಕೆಯೊಂದಿಗೆ ಕುಡಿದು ಸಿಗರೇಟ್ ಸೇದಿ ಮನೆ ತುಂಬಾ ಬಿಸಾಡಿದ್ದಾನೆ ಎಂದು ಹೇಳಲಾಗುತ್ತಿದೆ.

ಈ ಹಿನ್ನೆಲೆಯಲ್ಲಿ ಕ್ವಾರ್ಟರ್ಸ್ ನಲ್ಲಿದ್ದ ಸೋಪಾಗೆ ಬೆಂಕಿ ಹೊತ್ತಿಕೊಂಡು ಮನೆಯಲ್ಲಿದ್ದ ವಸ್ತುಗಳೆಲ್ಲಾ ಬೆಂಕಿಗೆ ಆಹುತಿಯಾಗಿದೆ. ಅಲ್ಲದೇ ಬೆಂಕಿ ಅನಾಹುತದಿಂದ ಅಕ್ಕಪಕ್ಕದಲ್ಲಿದ್ದ ಇತರೆ ಅಧಿಕಾರಿಗಳ ಕುಟುಂಬದವರ ಆಪತ್ತಿಗೂ ಕಾರಣವಾಗಿದೆ. ಹೀಗಾಗಿ ಇಬ್ಬರ ಅನೈತಿಕ ಸಂಬಂಧದಿಂದ ಪೊಲೀಸ್ ಕ್ವಾರ್ಟರ್ಸ್ ಸುಟ್ಟು ಹೋದ ಪರಿಣಾಮ ಹಿರಿಯ ಅಧಿಕಾರಿಗಳು ಪಿಎಸ್‍ಐ ಕಿರಣ ಸಾಮ್ರಾಟ್ ಹಾಗೂ ಪೇದೆಯ ಪತ್ನಿ ವಿರುದ್ಧ ಕೇಸ್ ದಾಖಲಿಸಿ ಜೈಲಿಗೆ ಕಳುಹಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *