ಬಳ್ಳಾರಿಯ ಕೊಟ್ಟೂರೇಶ್ವರನಿಗೆ ಸಿದ್ಧವಾಗುತ್ತಿದೆ ಹೊಸ ರಥ

Public TV
1 Min Read

ಬಳ್ಳಾರಿ: ಜಿಲ್ಲೆಯ ಕೊಟ್ಟೂರು ಬಸವೇಶ್ವರನ ರಥೋತ್ಸವಕ್ಕಾಗಿ ಈ ಬಾರಿ ಹೊಸ ರಥ ನಿಮಾರ್ಣವಾಗುತ್ತಿದೆ. ಕಳೆದ ಫೆಬ್ರವರಿ 21 ರಂದು ರಥದ ಅಚ್ಚು ಮುರಿದು ರಥೋತ್ಸವದ ವೇಳೆಯೇ ತೇರು ಮಗುಚಿ ಬಿದ್ದಿತ್ತು. ಇದರಿಂದಾಗಿ ನೂತನ ರಥ ನಿರ್ಮಾಣ ಕಾರ್ಯ ಯಾವಾಗ ನಡೆಯುತ್ತೋ ಅಂತಾ ಭಕ್ತರು ಆತಂಕಗೊಂಡಿದ್ದು, ಇದೀಗ ನೂತನ ರಥ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ.

ಸರ್ಕಾರ ನೂತನ ರಥ ನಿರ್ಮಾಣಕ್ಕಾಗಿ 2 ಕೋಟಿ ರೂಪಾಯಿ ಅನುದಾನ ನೀಡಿದ್ದು, ಈಗಾಗಲೇ ರಥ ನಿರ್ಮಾಣ ಕಾರ್ಯ ಅರ್ಧ ಮುಕ್ತಾಯಗೊಂಡಿದೆ. ಫೆಬ್ರುವರಿ 14ರಂದು ರಥೋತ್ಸವವನ್ನು ನೂತನ ರಥದಲ್ಲೆ ನಡೆಸಲಾಗುವುದು ಅಂತ ಉಜ್ಜೈನಿ ಶ್ರೀಗಳು ಹೇಳಿದ್ದಾರೆ.

ಈ ಬಾರಿ ನೂತನ ರಥದೊಂದಿಗೆ ಬಸವೇಶ್ವರನ ಜಾತ್ರೆ ಅದ್ಧೂರಿಯಾಗಿ ನಡೆಸಲು ದೇವಾಲಯದ ಆಡಳಿತ ಮಂಡಳಿ ಕೂಡ ಸಜ್ಜಾಗಿದೆ. ನೂತನ ರಥವನ್ನು ಸಿಎಂ ಸಿದ್ದರಾಮಯ್ಯ ಲೋಕಾರ್ಪಣೆ ಮಾಡಲಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *